Advertisement

ಸುಳ್ಯ: ಪತ್ನಿಯ ಕೊಲೆ ಪ್ರಕರಣ ; ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ

10:04 PM Dec 03, 2022 | Team Udayavani |

ಸುಳ್ಯ: ಇಲ್ಲಿನ ಬೀರಮಂಗಲ ಪರಿಸರದ ಬಾಡಿಗೆ ಮನೆಯಲ್ಲಿ ತನ್ನ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಪಶ್ಚಿಮ ಬಂಗಾಲ ಮೂಲದ ಆರೋಪಿ ಇಮ್ರಾನ್‌ ಶೇಕ್‌ನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ಪೊಲೀಸರು ಪಶ್ಚಿಮ ಬಂಗಾಲಕ್ಕೆ ತೆರಳಿ ಆರೋಪಿ ಇರುವ ಸ್ಥಳವನ್ನು ಪತ್ತೆ ಬಂಧಿಸಿ ಕರೆತಂದಿದ್ದರು. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ತಾನು ಕೊಲೆ ಮಾಡಿದ ದಿನವೇ ಬಸ್ಸಿನಲ್ಲಿ ರಾತ್ರಿ 10ಕ್ಕೆ ಬೆಂಗಳೂರಿಗೆ ತೆರಳಿ ಮಾರನೇ ದಿನ ಪಶ್ಚಿಮ ಬಂಗಾಲಕ್ಕೆ ಹೋಗುವ ರೈಲಿನಲ್ಲಿ ತೆರಳಿದ್ದ ಎನ್ನುವ ಸಂಗತಿ ತಿಳಿಸಿದ್ದ ಎನ್ನಲಾಗಿದೆ.

ಪೊಲೀಸರು ಆರೋಪಿಯನ್ನು ಡಿ. 1ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಡಿ. 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next