Advertisement

ಸುಳ್ಯ: ಮನೆಯ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ

12:44 AM Nov 05, 2022 | Team Udayavani |

ಸುಳ್ಯ: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ನಷ್ಟ ಉಂಟಾಗಿರುವ ಘಟನೆ ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದಲ್ಲಿ ನ. 3ರಂದು ಸಂಭವಿಸಿದೆ.

Advertisement

ಉಬರಡ್ಕ ಗ್ರಾಮದ ಮಾಣಿಬೆಟ್ಟು ನಿವಾಸಿ ಪಿತಾಂಬರ ಅವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ
ತಿಳಿಯುತ್ತಿದ್ದಂತೆ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿ ಮನೆಗೆ ತಗಲುವುದನ್ನು ತಪ್ಪಿಸಲಾಯಿತು.

ಕೊಟ್ಟಿಗೆಯಲ್ಲಿದ್ದ ತೆಂಗಿನಕಾಯಿ, ಸೌದೆ, ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಕೊಟ್ಟಿಗೆ ಪೂರ್ಣ ಸುಟ್ಟು ಹೋಗಿದೆ.

ಪಕ್ಕದಲ್ಲಿದ್ದ ತೆಂಗಿನ ಮರವೂ ಕೂಡ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಅಪಾರ ನಷ್ಟ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next