Advertisement

ಐಸಿಯುನಲ್ಲಿ ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿಗೆ ಚಿಕಿತ್ಸೆ

03:15 AM Jul 08, 2017 | Team Udayavani |

ಕಾರವಾರ: ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು,
ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿವಿಲ್‌ ಆಸ್ಪತ್ರೆ ಆಡಳಿತಾಧಿಕಾರಿ ಡಾ| ಶಿವಾನಂದ ಕುಡ್ತಲ
ಕರ್‌ ತಿಳಿಸಿದ್ದಾರೆ.

Advertisement

ಜು. 4ರಂದು ಬೆಂಗಳೂರಿನ ಸಾಗರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಅವರು, ಅಲ್ಲಿಂದ ಬಂದ ಮೇಲೆ ಶುಕ್ರವಾರ ಬೆಳಗಿನಜಾವ ಕಾರವಾರ ಸಿವಿಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಗ್ಯ ಮೊದಲು ಕಳವಳಕಾರಿಯಾಗಿದ್ದರೂ, ಈಗ ಸುಧಾರಿಸಿಕೊಂಡಿದ್ದಾರೆ. ಸುಕ್ರಜ್ಜಿಗೀಗ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಜ್ಞ ವೈದ್ಯರು ತಪಾಸಣೆ ಮಾಡಿದ್ದು, ಶ್ವಾಸಕೋಶದಲ್ಲಿನ ಸೋಂಕು ಹೊರತುಪಡಿಸಿದರೆ ಬೇರಾವ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಉಸಿರಾಟದ ತೊಂದರೆ ಅನುಭವಿಸುತ್ತಿರುವ ಸುಕ್ರಜ್ಜಿ ಇದೀಗ ಚೇತರಿಸಿಕೊಂಡಿದ್ದಾರೆ. ಸ್ವಲ್ಪ ದ್ರವಾಹಾರವನ್ನು ಸೇವಿಸಿದ್ದು, ಕಳವಳ ಪಡುವಂತಹದ್ದೇನಿಲ್ಲ.

ಆದರೂ ಅವರ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದೆ. 48 ಗಂಟೆಗಳ ಕಾಲ ಅವರ ಆರೋಗ್ಯದ ಸ್ಥಿರತೆಯನ್ನು ಗಮನಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next