Advertisement

ಕಂಪನಿಯಿಂದ ರೈತರಿಗೆ ಸೂಕ್ತ ಪರಿಹಾರ: ಸಚಿವ ಬೊಮ್ಮಾಯಿ

02:59 PM Jun 15, 2020 | Suhan S |

ಶಿಗ್ಗಾವಿ: ಕಡಿಮೆ ಮೊಳಕೆ ಅಂಶವಿರುವ ಕಳಪೆ ಸೋಯಾಬಿನ್‌ ಬಿತ್ತನೆ ಮಾಡಿದ ರೈತರಿಗೆ ಕಂಪನಿಯಿಂದ ಖರ್ಚು ವೆಚ್ಚ ಕೊಡಿಸಿ ಪರಿಹಾರ ಕಲ್ಪಿಸಲಾಗುವುದು. ಈ ಕುರಿತು ಕೃಷಿ ಸಚಿವ ಬಿ.ಸಿ. ಪಾಟೀಲ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಹಿರಿಯ ಕೃಷಿ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಪಟ್ಟಣದ ಶಾಸಕರ ನಿವಾಸದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಬಂಕಾಪುರ, ಶಿಗ್ಗಾವಿ ಭಾಗದ ರೈತರ ಜಮೀನು ಕ್ಷೇತ್ರದ ಮಾಹಿತಿ ಪಡೆಯಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 24 ಜನರಲ್ಲಿ ಕೋವಿಡ್‌ ಸೋಕಿನ ಪ್ರಕರಣ ಬೆಳಕಿಗೆ ಬಂದಿದ್ದು, 21 ಜನರು ಗುಣಮುಖರಾಗಿದ್ದಾರೆ. ಇನ್ನೂ ಮೂವರ ಆರೋಗ್ಯ ಸುಧಾರಿಸುವ ಲಕ್ಷಣಗಳಿವೆ. ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಕೋವಿಡ್‌ ಪರೀಕ್ಷೆ ಲ್ಯಾಬ್‌ ಹಾಗೂ ತೀವ್ರ ನಿಗಾ ಘಟಕ ಸೋಮವಾರ ಆರಂಭವಾಗಲಿದೆ. ಕ್ಷೇತ್ರದ ಸವಣೂರು ಹಾಗೂ ಶಿಗ್ಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಕ್ರಮವಾಗಿ 30 ಹಾಗೂ 8 ವಿಶೇಷ ಬೆಡ್‌ ವ್ಯವಸ್ಥೆ, ಆಕ್ಷಿಜನ್‌ ಪೂರೈಕೆ ವಿಶೇಷತೆಯ ಕೋಣೆಯ ವ್ಯವಸ್ಥೆ ನೀಡಲಾಗುವುದು ಎಂದ ಅವರು, ಸಾರ್ವಜನಿಕರು ನಿರ್ಲಕ್ಷವಹಿಸದೇ ಅದಷ್ಟು ರಕ್ಷಾ ಮುಖ ಕವಚ ಹೊಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

ಮುಂದಿನ ವಾರದಲ್ಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹಾಗೂ ಕಂದಾಯ ಸಚಿವ ಆರ್‌. ಅಶೋಕ ತಾಲೂಕಿಗೆ ಆಗಮಿಸಲಿದ್ದು, 19 ಕೋಟಿ ವೆಚ್ಚದಲ್ಲಿ ಮೊರಾರ್ಜಿ ವಸತಿ ಶಾಲೆ ಕಟ್ಟಡ ಹಾಗೂ 10 ಕೋಟಿ ವೆಚ್ಚದ ಹಳೆ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ನೂತನ ಸಂಕೀರ್ಣ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next