Advertisement

ಹಾಸನದ ರೈತ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌: ಕೊಲೆಗೈದ ಪತ್ನಿ !

01:06 PM Jul 18, 2018 | |

ಹಾಸನ: ಬೇಲೂರಿನ ಮತ್ತಾವರದಲ್ಲಿ ಜೂನ್‌ 8 ರಂದು ಸಾವನ್ನಪ್ಪಿದ ರೈತನ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ದೊರಕಿದ್ದು , ತನಿಖೆ ವೇಳೆ ಪತ್ನಿ ಮತ್ತು ಪುತ್ರ ಕತ್ತು ಹಿಸುಕಿ ಕೊಲೆಗೈದಿರುವ ಅಂಶ ಬೆಳಕಿಗೆ ಬಂದಿದೆ. 

Advertisement

45 ರ ಹರೆಯದ ಯೋಗೇಶ್‌ ನೇಣಿನಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ವರದಿ ಬಂದಿತ್ತು. 

ಪತ್ನಿ ಗಾಯತ್ರಿ ಮತ್ತು ಪುತ್ರ ದರ್ಶನ್‌ ಸೇರಿ ಕತ್ತು ಹಿಸುಕಿ ಕೊಲೆಗೈದು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಾಟಕವಾಡಿದ್ದರು. 

ಪೊಲೀಸರು ತಾಯಿ ಮತ್ತು ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೈದಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next