Advertisement

ಹೆಂಡತಿಯ ಬುದ್ದಿಮಾತಿಗೆ ಮನನೊಂದ ಪತಿ ನದಿಗೆ ಹಾರಿ ಆತ್ಮಹತ್ಯೆ

10:36 AM Dec 19, 2019 | sudhir |

ವಿಜಯಪುರ: ತಂದೆಯ‌ ನಿಧನದ ಕಾರಣ ಬಂದಿದ್ದ‌ ವಿಮಾ ಹಣವನ್ನು ಹಾಳುಮಾಡದಂತೆ‌ ಪತ್ನಿ ಬುದ್ದಿ ಮಾತು ಹೇಳಿದಳೆಂಬ ಕ್ಷುಲ್ಲಕ ಕಾರಣಕ್ಕೆ ಪತಿ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ
ಕೊಲ್ಹಾರ ಬಳಿ ಸಂಭವಿಸಿದೆ.

Advertisement

ಕಲಬುರಗಿ ಜಿಲ್ಲೆ ಆಳಂದ ಪಟ್ಟಣದ ನಿವಾಸಿ ಶ್ರೀಶೈಲ ಚೌಡಪ್ಪ ಷಣ್ಮುಖ (35) ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ .

ತನ್ನ ತಂದೆ ಮೃತಪಟ್ಟ ಕಾರಣ ಬಂದಿರುವ ವಿಮಾ ಹಣವನ್ನು ಹಾಳು ಮಾಡದೇ ತಾಯಿಯ ಬಳಿ ಕೊಡಿ ಎಂದು ಪತ್ನಿ ಬುದ್ದಿಮಾತು ಹೇಳಿದ್ದಳು.

ಇದರಿಂದ ನೊಂದುಕೊಂಡ ಶ್ರೀಶೈಲ, ಮಂಗಳವಾರ ತಮ್ಮ ಸ್ನೇಹಿತರೊಂದಿಗೆ ಹುಬ್ಬಳ್ಳಿಗೆ ಹೋಗಿ ಬರುವುದಾಗಿ ಹೆಂಡತಿಗೆ ಹೇಳಿ ಮನೆಯಿಂದ ಹೋಗಿದ್ದ. ನಂತರ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿ ಇರುವ ಕೃಷ್ಣಾ ಸೇತುವೆ ಮೇಲಿಂದ ಮೊಬೈಲ್ ನಲ್ಲಿ ಸೆಲ್ಫು ತೆಗೆದುಕೊಳ್ಳುವುದಾಗಿ ಹೇಳಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾನೆ.

ಬುಧವಾರ ಬೆಳಿಗ್ಗೆ ಮೃತದೇಹ ನದಿಯಲ್ಲಿ ತೇಲಿದ್ದು, ಶವವನ್ನು ಹೊರ ತಗೆಯಲಾಗಿದೆ.

Advertisement

ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next