Advertisement

Kumbla ಆತ್ಮಹತ್ಯೆ: ಸಂಬಂಧಿಕನ ಬಂಧನ

12:48 AM Nov 11, 2023 | Team Udayavani |

ಕುಂಬಳೆೆ: ಮಹಿಳೆ ಮತ್ತು ಆಕೆಯ ಪುತ್ರಿ ಬಾವಿಗೆ ಹಾರಿ ಆತ್ಮಹತ್ಯೆಗೈದ ಪ್ರಕರಣದ ಆರೋಪಿ ಮಹಿಳೆಯ ಸಂಬಂಧಿಕ, ಖಾಸಗಿ ಶಾಲೆಯ ಅಧ್ಯಾಪಕನ ವಿರುದ್ಧ ಆತ್ಮಹತ್ಯೆಗೆ ಕಾರಣ ಮತ್ತು ಪುರಾವೆ ನಾಶಗೊಳಿಸಿದ ಆರೋಪದಲ್ಲಿ ಮೇಲ್ಪರಂಬ ನಿವಾಸಿ ಸಫ್ವಾನ್ ಅದೂರು (29)ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.

Advertisement

ಕಳೆದ ಸೆ. 15ರಂದು ಕಳನಾಡು ನಿವಾಸಿ ಗಲ್ಫ್ ಉದ್ಯೋಗಿ ತಾಜುದ್ದಿನ್‌ ಅವರ ಪತ್ನಿ ರುಬೀನಾ (32) ಮತ್ತು ಆಕೆಯ ಪುತ್ರಿ ಕೆ. ಹನಾನ ಮರಿಯಂ (5) ಅವರು ಮನೆ ಬಳಿಯ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿನಲ್ಲಿ ಸಂಶಯಗೊಂಡ ಮಹಿಳೆಯ ತಂದೆ ಅಬ್ದುಲ್‌ ರಹ್ಮಾನ್‌ ಅವರು ಮೇಲ್ಪರಂಬ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು.

ಸಫ್ವಾನ್ ಮತ್ತು ರುಬೀನಾ ಜಾಲತಾಣಗಳ ಮೂಲಕ ಪರಿಚಯವಾಗಿ ಬಳಿಕ ಪ್ರೇಮಕ್ಕೆ ತಿರುಗಿ ಕೆಲವು ತಿಂಗಳ ಬಳಿಕ ಆರೋಪಿ ಬೇರೊಂದು ಯುವತಿಯನ್ನು ವಿವಾಹವಾಗುವುದಾಗಿ ಮಹಿಳೆಗೆ ತಿಳಿದು ಪರಸ್ಪರ ವಾಗ್ವಾದವಾಗಿದ್ದು, ಇದು ಮಹಿಳೆ ಮತ್ತು ಬಾಲಕಿಯ ಸಾವಿಗೆ ಕಾರಣವಾಗಿರುವುದಾಗಿ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಇದರಂತೆ ಆರೋಪಿಯನ್ನು ಬಂಧಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next