Advertisement

ಮಾರಾಟವಾಗದ ಕಬ್ಬು ಮನನೊಂದು ತಾನೇ ಬೆಳೆದ ಕಬ್ಬಿನ ಗದ್ದೆಗೆ ಬೆಂಕಿ ಕೊಟ್ಟ ರೈತ

02:55 PM Jun 09, 2020 | sudhir |

ಶಿವಮೊಗ್ಗ : ರೈತನೊಬ್ಬ ತಾನು ಬೆಳೆದ ಕಬ್ಬನ್ನು ಕೊಳ್ಳಲು ಯಾರೂ ಬರಲಿಲ್ಲ ಎಂದು ಮನನೊಂದು ಕಟಾವಿಗೆ ಬಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿನ ಗದ್ದೆಗೆ ಬೆಂಕಿ ಕೊಟ್ಟ ಘಟನೆ ಹೊಸನಗರ ತಾಲೂಕಿನ ಹಾರಂಬಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Advertisement

ಕೋವಿಡ್ ಹಾವಳಿಯಿಂದ ದೇಶದೆಲ್ಲೆಡೆ ಲಾಕ್ ಡೌನ್ ಮಾಡಲಾಗಿತ್ತು ಈ ಸಂದರ್ಭ ಹಾರಂಬಳ್ಳಿ ಗ್ರಾಮದ ಚಂದ್ರ ಶೇಖರ್ ಎನ್ನುವ ರೈತನೋರ್ವ ತಾನು ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದ ಆದರೆ ಅದರ ಖರೀದಿಗೆ ಯಾರು ಬರಲಿಲ್ಲ ಕಳೆದ ಕೆಲವು ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ಕಬ್ಬುಗಳೆಲ್ಲಾ ನೆಲಕುರುಳಿತ್ತು ಇದರಿಂದ ಮನನೊಂದ ರೈತ ತಾನು ಒಂದೂವರೆ ಎಕರೆ ಜಾಗದಲ್ಲಿ ಬೆಳೆದ ಕಬ್ಬಿಗೆ ಬೆಂಕಿ ಹಚ್ಚಿದ್ದಾನೆ.

ಇದರಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next