Advertisement

ಭಾಷಾ ಪ್ರಬುದ್ಧತೆ ಬೆಳೆಸಿ ಸಿರಿವಂತರಾಗಿ : ಅಣ್ಣಪ್ಪ

11:47 PM Jul 13, 2017 | Karthik A |

ಮಹಾನಗರ: ವಿದ್ಯಾರ್ಥಿ ಜೀವನದಲ್ಲಿಯೇ ಮಕ್ಕಳು ವಿವಿಧ ಭಾಷೆಗಳನ್ನು ಕಲಿತು ಭಾಷಾ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಬಹಳ ಲಾಭವಿರುತ್ತದೆ. ದೈನಂದಿನ ಜೀವನ ಹಾಗೂ ದೇಶ – ವಿದೇಶದಲ್ಲಿನ ವ್ಯಾಪಾರ ಕ್ಷೇತ್ರದಲ್ಲಿ ವ್ಯವಹರಿಸಲು ಬಹುಭಾಷೆಗಳನ್ನು ಕಲಿತು ಕೊಳ್ಳುವುದು ಅತೀ ಅಗತ್ಯ. ಇದರಿಂದ ವ್ಯಕ್ತಿತ್ವ ನಿರ್ಮಾಣವು ಸಲೀಸಾಗಿ ನೆರವೇರುತ್ತದೆ. ಇಂತಹ ಕಲಿಕಾ ವ್ಯವಸ್ಥೆಗೆ ಸಾಹಿತ್ಯ ಹಾಗೂ ಲಲಿತಕಲೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಕೆನರಾ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಅಣ್ಣಪ್ಪ ಪೈ ಅಭಿಪ್ರಾಯಪಟ್ಟರು. ಕೆನರಾ ಪ್ರೌಢಶಾಲೆಯ ವಿವಿಧ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ತನ್ನ ಪ್ರತಿಭೆಗಳನ್ನು ಒರೆಗೆ ಹಚ್ಚುವ ದೃಷ್ಟಿಯಿಂದ ಪ್ರತಿಯೊಬ್ಬ  ಮಗು ಯಾವುದಾದರೊಂದು ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಶಿಕ್ಷಕ ಮುರಾರಿ ಅವರು ಸಾಹಿತ್ಯ, ಲಲಿತಕಲೆ, ಆರೋಗ್ಯ, ಎನ್‌ಸಿಸಿ, ವಿಜ್ಞಾನ, ಪರಿಸರ ಹಾಗೂ ಇಂಟರಾಕ್ಟ್ ಸಂಘಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ನೀಡಿ ಸಂಘಗಳ ಸಂಚಾಲಕರು ಹಾಗೂ ಶಿಕ್ಷಕರನ್ನು ಪರಿಚಯಿಸಿದರು. ಮುಖ್ಯೋಪಾಧ್ಯಾಯಿನಿ ಅರುಣಾ ಕುಮಾರಿ ಅವರು ಸಂಘಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಅವುಗಳಲ್ಲಿ ಭಾಗ ವಹಿಸುವಂತೆ ಕರೆ ಕೊಟ್ಟರು. ಪ್ರತಿ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಾಲಾ ಸಂಚಾಲಕ ಪಂಚಮಾಲ್‌ ಗೋಪಾಲಕೃಷ್ಣ ಶೆಣೈ, ಹಿರಿಯ ಶಿಕ್ಷಕಿ ಲಕ್ಷ್ಮೀ ಜಿ., ಪೆರ್ಮುದೆ ಮೋಹನ್‌ ಕುಮಾರ್‌, ಕೆನರಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲಲನಾ ಜೆ. ಶೆಣೈ ಮುಂತಾದವರು ಉಪಸ್ಥಿತರಿದ್ದರು. ಪ್ರಾಪ್ತಿ ಸ್ವಾಗತಿಸಿದರು. ಜ್ವಿನ್‌  ವಂದಿಸಿದರು. ವಿದ್ಯಾರ್ಥಿಗಳಾದ ಸೃಷ್ಟಿ, ನಂದನ್‌, ಸ್ಫೂರ್ತಿ ಹಾಗೂ ಅದಿತಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next