Advertisement

ಕೆರೆಗಳ ಸಂರಕ್ಷಣೆ ಕೋರಿ ಸಿಎಂಗೆ ಪತ್ರ ಬರೆದ ಸುದೀಪ್‌

11:43 AM Aug 09, 2017 | |

ಬೆಂಗಳೂರು: ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ನಿರ್ಜೀವ ಕೆರೆಗಳ ಡಿನೋಟಿಫಿಕೇಶನ್‌ ಕೈಬಿಡುವ ಒತ್ತಾಯ ಹಾಗೂ ಕೆರೆಗಳ ಸಂರಕ್ಷಣೆಗೆ ನಟ ಕಿಚ್ಚ ಸುದೀಪ್‌ ಧ್ವನಿಗೂಡಿಸಿದ್ದಾರೆ.

Advertisement

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ನಟ ಸುದೀಪ್‌, ಕೆರೆಗಳು ನಮ್ಮ ಜೀವನಾಡಿಗಳಾಗಿದ್ದು, ನಮ್ಮ ಸಂತೃಪ್ತಿ ಬದುಕಿಗೆ ಅತ್ಯವಶ್ಯಕವಾಗಿರುತ್ತವೆ.

ಕೆರೆಗಳ ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಎಲ್ಲಾ ಕೆರೆಗಳನ್ನು ಸಂರಕ್ಷಣೆ ಹಾಗೂ ಅಭಿವೃದ್ಧಿಗೆ  ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next