Advertisement

Sudan Clash: ಸೂಡಾನ್‌ ಸಂಘರ್ಷ ಭಾರತೀಯರಿಗೆ ಭೀತಿ

12:49 AM Apr 20, 2023 | Team Udayavani |

ಹೊಸದಿಲ್ಲಿ: ಸಂಘರ್ಷಪೀಡಿತ ಸೂಡಾ ನ್‌ನಲ್ಲಿ ಸತತ 5ನೇ ದಿನವೂ ಸೇನಾ ಪಡೆಗಳ ನಡುವಿನ ಭೀಕರ ಕಾಳಗ ಮುಂದುವರಿದಿದೆ. ಒಂದೆಡೆ ಪರಿಸ್ಥಿತಿ ವಿಕೋಪಕ್ಕೇರಿದ್ದರೆ ಮತ್ತೂಂದೆಡೆ ಸೂಡಾ ನ್‌ನಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಅತಂತ್ರವಾಗಿದ್ದು, ಅವರ ಸುರಕ್ಷತೆಗಾಗಿ ಭಾರತ ನೆರೆ ರಾಷ್ಟ್ರಗಳ ನೆರವು ಕೋರಿದೆ.

Advertisement

ಈಗಾಗಲೇ ಸಂಘರ್ಷದಲ್ಲಿ ಭಾರತೀ ಯರೊಬ್ಬರು ಮೃತಪಟ್ಟಿದ್ದು, ಕರ್ನಾಟಕ ಬುಡಕಟ್ಟು ಜನಾಂಗದ 31 ಮಂದಿಯ ಸಹಿತ ಹಲವಾರು ಭಾರತೀಯರು ಪ್ರದೇಶದಲ್ಲಿ ಸಿಲುಕಿದ್ದಾರೆ. ಆದರೆ ಯುದ್ಧ ಸಂದರ್ಭ ಹಿನ್ನೆಲೆ ಪ್ರಜೆಗಳ ಸ್ಥಳಾಂತರ ಸಾಧ್ಯವಿಲ್ಲದ ಕಾರಣ, ತತ್‌ಕ್ಷಣಕ್ಕೆ ಅಗತ್ಯವಿರುವ ಸ್ಥಳೀಯ ನೆರವು ನೀಡಲು ಭಾರತ ಸರಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ ಭಾರತದ ವಿದೇಶಾಂಗ ಸಚಿವಾಲಯವು ಅಮೆರಿಕ, ಸೌದಿ, ಯುಎಇ, ಬ್ರಿಟನ್‌ಗಳ ನೆರವು ಕೋರಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಭಾರತೀಯ ರಾಯಭಾರ ಕಚೇರಿ ಕೂಡ ಸಿಲುಕಿರುವ ಭಾರತೀಯರ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ಸೂಚನೆ ಗಳನ್ನು ನೀಡುತ್ತಿದೆ. ಅಲ್ಲದೇ ಅಗತ್ಯಸೇವೆ ಗಳನ್ನು ಪೂರೈಸುವ ನಿಟ್ಟಿನಲ್ಲಿ ಸಹಾಯ ವಾಣಿಯನ್ನೂ ಸ್ಥಾಪಿಸಿದೆ. ಕದನ ವಿರಾಮ ಮಾಡುವಂತೆ ವಿಶ್ವಸಂಸ್ಥೆಯ ಮನವಿಗೂ ಬಂಡುಕೋರರು ಸ್ಪಂದಿಸಿಲ್ಲ.

ಸಿದ್ದರಾಮಯ್ಯ ಪರ ಜೈರಾಮ್‌
ಸೂಡಾನ್‌ನಲ್ಲಿ ಸಿಲುಕಿರುವ ಕರ್ನಾಟಕ ಮೂಲದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ 31 ಮಂದಿಯನ್ನು ಮರಳಿ ಕರೆತರಲು ಮನವಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಪರಿಸ್ಥಿತಿಯನ್ನು ನಿಮ್ಮ ಲಾಭಕ್ಕೆ ಬಳಸಿಕೊಳ್ಳಬೇಡಿ ಎಂದಿದ್ದರು. ಈ ಬಗ್ಗೆ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಆಕ್ಷೇಪ ವ್ಯಕ್ತಪಡಿಸಿ, ಜೈಶಂಕರ್‌ ಅವರನ್ನು ಬಹಳ ಹಿಂದಿನಿಂದ ನೋಡುತ್ತಿದ್ದೆ. ಆದರೆ ಅವರ ವರ್ತನೆ ಈಗ ಅಸಹ್ಯವೆನಿಸುತ್ತಿದೆ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next