Advertisement
ಪ್ರಶ್ನೋತ್ತರ ಕಲಾಪದ ಸಂದರ್ಭದಲ್ಲಿ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜ್ ಮಂಜೂರಾಗಿದ್ದರೂ ಇದುವರೆಗೆ ಏಕೆ ಅನುದಾನ ಬಿಡುಗಡೆ ಮಾಡಿಲ್ಲವೆಂದು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಅನುದಾನದ ಕೊರತೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿಲ್ಲ.ಮುಂದಿನ ದಿನಗಳಲ್ಲಿ ಅನುದಾನ ನೀಡಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದರು.
Related Articles
ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಅನುದಾನ ಬಿಡುಗಡೆ ವಿಷಯದ ಪ್ರಶ್ನೋತ್ತರ ಕಲಾಪದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಗೈರು ಹಾಜರಾತಿಗೆ ಪ್ರತಿ ಪಕ್ಷ ಬಿಜೆಪಿ ಸದಸ್ಯರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಶಾಸಕ ಲಕ್ಷ್ಮಣ ಸವದಿ ಸಚಿವರ ಗೈರು ವಿಷಯ ಪ್ರಸ್ಥಾಪಿಸಿ ಕಳೆದ 4 ದಿನಗಳಿಂದಲೂ ವೈದ್ಯಕೀಯ ಸಚಿವರು ಸದನದಲ್ಲಿ ಕಾಣಿಸಿಕೊಂಡಿಲ್ಲ.ಸಚಿವರು ಎಲ್ಲಿದ್ದಾರೆಂದು ಪ್ರಶ್ನಿಸಿದರು.ಸದನಕ್ಕೆ ಬರದಿರುವ ಬಗ್ಗೆ ಸ್ಪೀಕರ್ ಅವರಿಂದ ಅನುಮತಿ ಪಡೆದಿದ್ದಾರೆಯೇ ಎಂದು ಕೇಳಿದರು.ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಇದಕ್ಕೆ ದನಿಗೂಡಿಸಿ ಆಡಳಿತ ಪಕ್ಷದ ಮೊದಲನೇ ಸಾಲಿನಲ್ಲಿ ಒಬ್ಬರೇ ಒಬ್ಬ ಸಚಿವರಿಲ್ಲವೆಂದು ಖಾಲಿ ಕುರ್ಚಿಗಳ ಕಡೇ ಬೆರಳು ಮಾಡಿ ತೋರಿಸಿದರು.
Advertisement
ಹಿರಿಯ ಶಾಸಕ ಗೋವಿಂದ ಕಾರಜೋಳ ಸಚಿವರ ಗೈರು ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿ ಸದನಕ್ಕೆ ಬರದೇ ಇರುವಷ್ಟು ಪುರುಸೊತ್ತು ಇಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಬಹಳಷ್ಟು ಜನ ಮಂತ್ರಿಗಳಾಗಲು ತಯಾರಿದ್ದಾರೆ.ಬಿ.ಆರ್ ಯಾವಗಲ್,ಜೆ.ಟಿ ಪಾಟೀಲ್ ಜಿ.ಎಸ್ ಪಾಟೀಲ್ ಮೊದಲಾದವರು ಸಚಿವರಾಗುವ ಅವಕಾಶಕ್ಕೆ ಕಾಯುತ್ತಿದ್ದಾರೆಂದು ಹೇಳಿದರು.
ಉಪ ಸಭಾಧ್ಯಕ್ಷ ಶಿವಶಂಕರ ರೆಡ್ಡಿ ಉತ್ತರಿಸುತ್ತಾ ಸಚಿವರು ಸದನಕ್ಕೆ ಬರದೇ ಇರುವ ಬಗ್ಗೆ ಸಭಾಧ್ಯಕ್ಷರ ಅನುಮತಿ ಪಡೆದಿದ್ದಾರೆಂದು ಸ್ಪಷ್ಟನೆ ನೀಡಿದರು.