Advertisement

ಹೊಸ ಸಿನಿಮಾದತ್ತ ಸುಬ್ರಮಣ್ಯ ಪ್ರಸಾದ

04:44 PM Apr 06, 2023 | Team Udayavani |

“ಕೊಡೆ ಮುರುಗ’ ಎಂಬ ಕಾಮಿಡಿ ಡ್ರಾಮಾ ಸಿನಿಮಾವನ್ನು ನಿರ್ದೇಶಿಸಿ, ಅದರಲ್ಲೊಂದು ಪ್ರಮುಖ ಪಾತ್ರ ಕೂಡಾ ಮಾಡಿದ್ದ ಸುಬ್ರಮಣ್ಯ ಪ್ರಸಾದ್‌ ಈಗ ಹೊಸ ಸಿನಿಮಾಕ್ಕೆ ಅಣಿಯಾಗಿದ್ದಾರೆ.

Advertisement

ಈಗಾಗಲೇ ಹೊಸ ಸಿನಿಮಾದ ಪೂರ್ವತಯಾರಿ ಜೋರಾಗಿ ನಡೆದಿದ್ದು, ಶೀಘ್ರದಲ್ಲೇ ಸೆಟ್ಟೇರಲಿದೆ. ಈ ಬಾರಿಯೂ ನಿರ್ದೇಶನದ ಜೊತೆಗೆ ಸುಬ್ರಮಣ್ಯ ಪ್ರಸಾದ್‌ ಅವರೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸದ್ಯ ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್‌ ಟ್ರೆಂಡ್‌ ನಡೆಯುತ್ತಿದ್ದು, ಸುಬ್ರಮಣ್ಯ ಪ್ರಸಾದ್‌ ಕೂಡಾ ಈ ಬಾರಿ ಕಂಟೆಂಟ್‌ ಆಧಾರಿತ ಸಿನಿಮಾದತ್ತ ಗಮನಹರಿಸಿದ್ದಾರೆ. “ಸಿನಿಮಾದ ಕಂಟೆಂಟ್‌ ಗಟ್ಟಿಯಾಗಿದ್ದರೆ ಸಿನಿಮಾವನ್ನು ಜನ ಇಷ್ಟಪಡುತ್ತಾರೆ. ಒಮ್ಮೆ ಜನ ಇಷ್ಟಪಟ್ಟರೆ ಮುಂದೆ ಸಿನಿಮಾ ಬೇರೆ ಮಟ್ಟಕ್ಕೆ ಸಾಗುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಆ ದೃಷ್ಟಿಯಿಂದ ನಾನು ಕೂಡಾ ಇವತ್ತಿನ ಟ್ರೆಂಡ್‌ ಅನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಈಗಾಗಲೇ ಪೂರ್ವತಯಾರಿ ನಡೆಯುತ್ತಿದೆ. ಒಂದಷ್ಟು ಹೊಸ ಪ್ರಯೋಗದೊಂದಿಗೆ ಸಿನಿಮಾವನ್ನು ಕಟ್ಟಿಕೊಡಬೇಕೆಂಬ ಆಸೆಯಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಸುಬ್ರಮಣ್ಯ ಪ್ರಸಾದ್‌.

Advertisement

Udayavani is now on Telegram. Click here to join our channel and stay updated with the latest news.

Next