Advertisement
ಹರಿಹರ ಪಳ್ಳತ್ತಡ್ಕ ಗ್ರಾಮದ ಮಿತ್ತಮಜಲು ನಿವಾಸಿ ಕೃಷ್ಣಪ್ಪ ಅವರ ಪುತ್ರ ಪ್ರವೀಣ್ (22) ಮೃತಪಟ್ಟವರು. ಅವರು ಹೆತ್ತವರು ಮತ್ತು ಸಹೋದರಿ ಯನ್ನು ಅಗಲಿದ್ದಾರೆ.
Related Articles
ಪ್ರವೀಣ್ ಹೆತ್ತವರು ಕೂಲಿ ಕಾರ್ಮಿಕರು. ಬಡತನದ ಕಾರಣ ಪಿಯುಸಿ ವರೆಗೆ ಓದಿದ ಬಳಿಕ ಪ್ರವೀಣ್ ಕೂಡ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಹೆತ್ತವರ ಏಕೈಕ ಪುತ್ರನಾಗಿರುವ ಈತ ಚುರುಕು ಮತಿಯಾಗಿದ್ದರು. ಮನೆಗೆ ಆಧಾರ ಸ್ತಂಭವಾಗಿದ್ದ ಮಗನನ್ನು ಕಳೆದು ಕೊಂಡ ಹೆತ್ತವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಊರಿನ ದೇಗುಲದಲ್ಲಿ ಬ್ರಹ್ಮ ಕಲಶೋತ್ಸವಕ್ಕೆ ಸಿದ್ಧತೆಗಳು ಸಂಭ್ರಮದಿಂದ ನಡೆ ಯು ತ್ತಿರುವಾಗ ಯುವಕನ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿಕೊಂಡಿದೆ.
Advertisement
ದಿಢೀರನೆ ಮಳೆಸುಬ್ರಹ್ಮಣ್ಯ ಹಾಗೂ ಸುತ್ತಮುತ್ತ ಗುರುವಾರ ಸಂಜೆ ವೇಳೆಗೆ ದಿಢೀರನೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಯಿತು. ಹರಿಹರ, ಕೊಲ್ಲಮೊಗ್ರು, ಬಾಳುಗೋಡು, ಗುತ್ತಿಗಾರು, ಕಲ್ಮಕಾರು ಗುತ್ತಿಗಾರು, ಯೇನೆಕಲ್ಲು, ಮೊದಲಾದ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕೆಎಸ್ಎಸ್ ಕಾಲೇಜಿನಲ್ಲಿ ಮಂಗಳೂರು ವಿ.ವಿ. ಮಟ್ಟದ ಅಂತರ್ ಜಿಲ್ಲಾ ಪುರುಷರ ಕಬಡ್ಡಿ ಪಂದ್ಯಾಟ ನಡೆಯುತ್ತಿದ್ದು ಮಳೆಯಿಂದಾಗಿ ವೇದಿಕೆ, ಶಾಮಿಯಾನ ಧರಾಶಾಯಿಯಾಗಿವೆ. ಪಂದ್ಯಾಟಕ್ಕೂ ಮಳೆಯಿಂದ ಅಡ್ಡಿಯಾಯಿತು.