Advertisement

ಸುಬ್ರಹ್ಮಣ್ಯ: ಅರಂಪಾಡಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ  ಒಂಟಿ ಸಲಗ

12:30 AM Mar 15, 2019 | |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿ ಮಧ್ಯೆ ಸುಬ್ರಹ್ಮಣ್ಯ ಸಮೀಪ ಅರಂಪಾಡಿ ಎಂಬಲ್ಲಿ ಗುರುವಾರ ಸಂಜೆ ಹೊತ್ತು ಒಂಟಿ ಸಲಗವೊಂದು ರಸ್ತೆ ಮಧ್ಯೆ ಕಾಣಿಸಿಕೊಂಡಿದೆ. 

Advertisement

ದ್ವಿಚಕ್ರ ವಾಹನ ಸವಾರರು ಈ ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ಕಾಡಂಚಿನಿಂದ ಒಂಟಿ ಸಲಗ ಇಳಿದು ಬಂದು ರಸ್ತೆ ದಾಟಿದೆ. ಬಳಿಕ ಪಕ್ಕದ ಅರಣ್ಯ ಸೇರಿದೆ. ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ಸಮಯಪ್ರಜ್ಞೆ ಮೆರೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಈ ರಸ್ತೆ ಮೇಲೆ ತೆರಳುವ ವಾಹನ ಸವಾರರಿಗೆ ಎಚ್ಚರಿಕೆಯಿಂದ ಪ್ರಯಾಣ ಬೆಳೆಸುವಂತೆ ಸ್ಥಳಿಯರು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next