Advertisement

Subrahmanya: ಕಂಬದಿಂದ ಬಿದ್ದು ಯುವಕನಿಗೆ ಗಾಯ

11:28 PM Sep 10, 2023 | Team Udayavani |

ಸುಬ್ರಹ್ಮಣ್ಯ: ಅಷ್ಟಮಿ ಕಾರ್ಯಕ್ರಮಕ್ಕೆ ಮೊಸರು ಕುಡಿಕೆ ಕಂಬ ಸ್ಥಾಪನೆ ವೇಳೆ ಯುವಕನೊಬ್ಬ ಕಂಬದಿಂದ ಬಿದ್ದು ಗಾಯಗೊಂಡ ಘಟನೆ ಹಾಗೂ ಬಳಿಕ ಕಾರ್ಯಕ್ರಮ ಸ್ಥಗಿತಗೊಳಿಸಿದ ಘಟನೆ ರವಿವಾರ ಕಡಬ ತಾಲೂಕಿನ ಐನೆಕಿದುವಿನಲ್ಲಿ ಸಂಭವಿಸಿದೆ.

Advertisement

ಮೊಸರು ಕುಡಿಕೆ ಕಂಬ ನಿಲ್ಲಿಸಿ ಕಂಬಕ್ಕೆ ಹತ್ತಿ ಭರತ್‌ ಎನ್ನುವವರು ಗ್ರೀಸ್‌ ಹಚ್ಚುತಿದ್ದ ವೇಳೆ ಕಂಬದಿಂದ ಆಯ ತಪ್ಪಿ ಕೆಳಗೆ ಬಿದ್ದು, ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ಸಂಘಟಕರು ಅಷ್ಟಮಿ ಕಾರ್ಯಕ್ರಮವನ್ನು ರದ್ದು ಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next