Advertisement

Subrahmanya: ಕುಮಾರ ಪರ್ವತ ಚಾರಣ ಆರಂಭಿಸಿದ ಚಾರಣಿಗರು

01:35 AM Oct 09, 2024 | Team Udayavani |

ಸುಬ್ರಹ್ಮಣ್ಯ: ಅರಣ್ಯ ಇಲಾಖೆಯ ಹೊಸ ಮಾರ್ಗ ಸೂಚಿಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತ ಚಾರಣಕ್ಕೆ ಇದೀಗ ಅವಕಾಶ ನೀಡಿದ್ದು, ಚಾರಣಿಗರು ಆನ್‌ಲೈನ್‌ ಬುಕ್‌ ಮಾಡಿ ಚಾರಣ ಆರಂಭಿಸಿದ್ದಾರೆ.

Advertisement

ಆನ್‌ಲೈನ್‌ ಮೂಲಕ ನೋಂದಾಯಿಸಿದ ಚಾರಣಿಗರು ಮಂಗಳವಾರ ಚಾರಣ ಕೈಗೊಂಡಿದ್ದಾರೆ. ಅದರಂತೆ ಹೊಸ ಮಾರ್ಗಸೂಚಿ ಬಳಿಕ ಮಂಗಳವಾರ ಮೊದಲ ತಂಡ ಕುಕ್ಕೆ ಸುಬ್ರಹ್ಮಣ್ಯದ ದೇವಗದ್ದೆ ಮೂಲಕ ಚಾರಣ ಕೈಗೊಂಡರು.

ಸುಮಾರು 9 ಮಂದಿ ಮಂಗಳವಾರ ಚಾರಣ ಕೈಗೊಂಡಿದ್ದರು. ಕಳೆದ ವರ್ಷದ ವರೆಗೆ ಕುಮಾರಪರ್ವತ ಚಾರಣ ಸುಲಭವಾಗಿತ್ತು. ಕೆಲ ಕಠಿನ ನಿಯಮಗಳ ಜತೆಗೆ ನೇರವಾಗಿ ಚಾರಣಕ್ಕೆ ತೆರಳಬಹುದಾಗಿತ್ತು. ಆದರೆ ಈ ಬಾರಿ ಚಾರಣದ ನಡುವೆ ತಂಗಲು ನಿರ್ಬಂಧಿಸಲಾಗಿದೆ.ಆದ್ದರಿಂದ ಒಂದೇ ದಿನದಲ್ಲಿ ಚಾರಣ ಪೂರ್ತಿಗೊಳಿಸಬೇಕಾದ ಅನಿವಾರ್ಯತೆ ಚಾರಣಿಗರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next