Advertisement
ಕೃಷಿ ಇಲಾಖೆಯ ಮಾಹಿತಿ ಪ್ರಕಾರ, ಜಿಲ್ಲೆಯು 16 ವರ್ಷಗಳಲ್ಲಿ ಬರೊಬ್ಬರಿ 11 ವರ್ಷ ಬರದ ಬಿಸಿ ಕಂಡಿದೆ. ಬರದ ಕೆನ್ನಾಲಿಗೆಗೆ ಬೆಂದಿರುವ ಜಿಲ್ಲೆಯ ರೈತ ಸಮೂಹ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಹಲವು ಕುಟುಂಬಗಳು ಗುಳೆ ಹೊರಟಿವೆ. ಸರ್ಕಾರ ಮಾತ್ರ ಕಾಟಾಚಾರಕ್ಕೆ ಎಂಬಂತೆ ಉದ್ಯೋಗ ಖಾತ್ರಿ ಯೋಜನೆ ಆರಂಭಿಸಿ ಜನರ ಗುಳೆ ತಡೆದು ಕೆಲಸ ಕೊಟ್ಟಿದ್ದೇವೆ ಎಂದು ಬೀಗುತ್ತಿದೆ. ಆದರೆ ವಾಸ್ತವದಲ್ಲಿ ಜನರ ನೋವು ಸರ್ಕಾರಕ್ಕೆ ಅರ್ಥವಾಗಿಲ್ಲ.
Related Articles
Advertisement
ಸರ್ಕಾರದ ಮುಂದೆ ಮಂಡೆಯೂರುವ ಸ್ಥಿತಿ: ಬರದ ಪರಿಸ್ಥಿತಿಯಿಂದಾಗಿ ಜಿಲ್ಲೆಯ ರೈತರು ಮತ್ತೆ ಸರ್ಕಾರದ ಮುಂದೆ ಮಂಡೆಯೂರುವಂತ ಸ್ಥಿತಿ ಬಂದಿದೆ. ಜನರ ಕೈಗೆ ಪುಡಿಗಾಸು ನೀಡಿ ಕೈತೊಳೆದುಕೊಳ್ಳುತ್ತದೆ. ಆದರೆ, ಬರದ ಪರಿಸ್ಥಿತಿ ಕಡಿಮೆ ಮಾಡಲು ಈ ಭಾಗದಲ್ಲಿ ಸರ್ಕಾರ ಮಹತ್ವದ ಯೋಜನೆಗಳನ್ನು, ಕೃಷಿ ಅಭಿವೃದ್ಧಿಗಾಗಿ ಪರ್ಯಾಯ ಮಾರ್ಗಗಳನ್ನು ಅನುಷ್ಠಾನ ಮಾಡುತ್ತಿಲ್ಲ. ಹೀಗಾಗಿ ರೈತರಿಗೆ ಪದೇ-ಪದೇ ಬರದ ಮೇಲೆ ಬರದ ಬರೆ ಬೀಳುತ್ತಿದೆ.
ಕೃಷಿ ಇಲಾಖೆಯಲ್ಲಿ ಡ್ರೋನ್ ಇಲ್ಲ!ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿನ ಬರದ ಸ್ಥಿತಿ ಅಧ್ಯಯನ ಮಾಡಲು ಆಗಮಿಸಿದ್ದರು. ಕೆಲವೇ ನಿಮಿಷ ಬರ ನೋಡಿ ಆ.29ರೊಳಗೆ ಬರದ ವರದಿ ಕೊಡಿ ಎಂದು ಇಲಾಖೆಯ ಅ ಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬಾರಿ ಡ್ರೋನ್ ಮೂಲಕ ಬೆಳೆ ಹಾನಿಯ ಕುರಿತು ವರದಿ ಸಿದ್ಧಪಡಿಸುವಂತೆ ಸೂಚನೆಯನ್ನೂ ನೀಡಿದ್ದರು. ಆದರೆ ಕೃಷಿ ಇಲಾಖೆಯಲ್ಲಿ ಡ್ರೋನ್ಗಳೇ ಇಲ್ಲ. ಬೆಂಗಳೂರಿನಿಂದ ತರಿಸಿ ಬೆಳೆ ಹಾನಿಯ ಕುರಿತು ಡಾಕ್ಯುಮೆಂಟರಿ ಮಾಡಿಸುವ ಕುರಿತು ಇನ್ನೂ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಹಾಗೂ ನೆರೆ ಹಾವಳಿಯಿಂದ ಹಾನಿಗೀಡಾದ ಪ್ರದೇಶದ ಕುರಿತು ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಇನ್ನೂ ಸಚಿವರು ಡ್ರೋನ್ ಮೂಲಕ ಸರ್ವೆ ನಡೆಸಿ ಡಾಕ್ಯುಮೆಂಟರಿ ಸಿದ್ಧಪಡಿಸಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ನಮ್ಮಲ್ಲಿ ಡ್ರೋನ್ ಇಲ್ಲ. ಬೆಂಗಳೂರಿನಿಂದ ತರಿಸಿ ಶೀಘ್ರದಲ್ಲಿ ಆಯ್ದ ಕೆಲವು ಭಾಗಗಳಲ್ಲಿ ಸರ್ವೇ ನಡೆಸಿ ವಿಡೀಯೋಗ್ರಾಫಿ ವರದಿ ಸಲ್ಲಿಸಲಾಗುವುದು.
ಹೊನ್ನಮಪ್ಪಗೌಡ,
ಜಂಟಿ ಕೃಷಿ ನಿರ್ದೇಶಕ, ಕೊಪ್ಪಳ