Advertisement

ಜಂತರ್ ಮಂತರ್‌ನಲ್ಲಿ ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳ ಧರಣಿ

03:44 PM Apr 17, 2022 | Team Udayavani |

ನವದೆಹಲಿ : ಯುದ್ಧ ಪೀಡಿತ ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳು ಜಂತರ್ ಮಂತರ್‌ನಲ್ಲಿ ಪೋಷಕರೊಂದಿಗೆ ಭಾನುವಾರ ಧರಣಿ ನಡೆಸಿ ಸರಕಾರದ ಗಮನ ಸೆಳೆದಿದ್ದಾರೆ.

Advertisement

ತಮ್ಮ ಉಳಿದ ಶಿಕ್ಷಣಕ್ಕಾಗಿ ಭಾರತೀಯ ಸಂಸ್ಥೆಗಳಿಗೆ ಪ್ರವೇಶವನ್ನು ಕೋರಿ ಹಲವು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು.

ಉಕ್ರೇನ್‌ನಿಂದ ಮಕ್ಕಳನ್ನು ಮರಳಿ ಕರೆತಂದ ರೀತಿಯಲ್ಲಿ ಸರ್ಕಾರವು ನಮ್ಮ ಮಕ್ಕಳ ವೃತ್ತಿಜೀವನವನ್ನು ಉಳಿಸಬೇಕು ಎಂದು ಪೋಷಕರು ಸರಕಾರಕ್ಕೆ ಮನವಿ ಮಾಡಿದ್ದಾರೆ.

ನಮ್ಮತ್ತ ಸರಕಾರ ಗಮನ ಹರಿಸಬೇಕು, ಸಹಾಯವನ್ನು ಮಾಡಬೇಕು, ಪರಿಗಣಿಸಿ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂಬ ಫಲಕಗಳನ್ನು ವಿದ್ಯಾರ್ಥಿಗಳು ಹಿಡಿದಿದ್ದರು.

ಪೋಷಕರು ಸೇರಿ 50 ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next