Advertisement

ಸಂಗಮ ಸ್ಥಳ: ನದಿ ನೀರಿನ ಕಸ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

05:55 AM Apr 18, 2019 | mahesh |

ಉಪ್ಪಿನಂಗಡಿ: ಸಂಗಮ ಕ್ಷೇತ್ರದಲ್ಲಿ ಭಕ್ತರ ಹಳೆಯ ವಸ್ತ್ರಗಳು ಹಾಗೂ ಪ್ಲಾಸ್ಟಿಕ್‌ ತಾಜ್ಯಗಳು ತುಂಬಿದ್ದ ನೇತ್ರಾವತಿ ನದಿಯನ್ನು ಇಂದ್ರಪ್ರಸ್ಥ ವಿದ್ಯಾಲಯದ ನಾಲ್ವರು ಸ್ಕೌಟ್‌ ವಿದ್ಯಾರ್ಥಿಗಳು ರವಿವಾರ ಸಂಜೆ ಸ್ವಯಂಪ್ರೇರಿತರಾಗಿ ಸ್ವಚ್ಛಗೊಳಿಸಿದರು.

Advertisement

ಗತಿಸಿದ ಬಂಧುಗಳ ಅಸ್ಥಿಗಳನ್ನು ನದಿಯಲ್ಲಿ ವಿಸರ್ಜಿಸುವ ಭಕ್ತರು, ಬಳಿಕ ತೀರ್ಥಸ್ನಾನ ಮಾಡಿ, ತಾವು ಉಟ್ಟಿರುವ ಬಟ್ಟೆಗಳನ್ನು ಅಲ್ಲೇ ಎಸೆದು ಸಂಗಮ ಸ್ಥಳದಲ್ಲಿ ತ್ಯಾಜ್ಯ ರಾಶಿ ಬೀಳುವಂತೆ ಮಾಡಿದ್ದಾರೆ. ಅಸ್ಥಿಗಳನ್ನು ತಂದ ಪ್ಲಾಸ್ಟಿಕ್‌ ಕರಡಿಗೆ, ಉಟ್ಟಿರುವ ಹಳೆಯ ವಸ್ತ್ರ ಇತ್ಯಾದಿಗಳನ್ನು ಅಲ್ಲೇ ಬಿಸುಡುತ್ತಿರುವ ಕಾರಣ ಬೇಸಗೆಯಲ್ಲಿ ನದಿಯಲ್ಲಿ ನೀರಿನ ಹರಿವೂ ಇಲ್ಲದೆ ತ್ಯಾಜ್ಯಗಳ ರಾಶಿಯೇ ಕಾಣುತ್ತಿತ್ತು. ಪರಿಸರದ ಅಸ್ವತ್ಛತೆ ಹಾಗೂ ದುರ್ನಾತಕ್ಕೂ ಕಾರಣವಾಗಿತ್ತು.

ಈ ಕುರಿತು ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಗಮನಿಸಿದ ಇಂದ್ರಪ್ರಸ್ಥ ವಿದ್ಯಾಲಯದ ಸ್ಕೌಟ್‌ ವಿದ್ಯಾರ್ಥಿಗಳು, ತಮ್ಮ ಪುಟ್ಟ ಕೈಗಳಿಂದಲೇ ನದಿಯನ್ನು ಸ್ವತ್ಛಗೊಳಿಸಿದರು. ಅವರು ಸಂಗ್ರಹಿಸಿದ ತ್ಯಾಜ್ಯಗಳ ರಾಶಿ ಸಾಕಷ್ಟು ದೊಡ್ಡದಾಗಿತ್ತು.

ಪಾವಿತ್ರ್ಯ ಕಾಪಾಡಿ ವಿದ್ಯಾರ್ಥಿಗಳ ಮನವಿ
ಭಕ್ತರು ಕ್ಷೇತ್ರದ ಪಾವಿತ್ರ್ಯ ಕಾಪಾಡಬೇಕು. ನದಿಯಲ್ಲಿ ಬಟ್ಟೆ, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಸೆದು ಹಾಳು ಮಾಡಬಾರದು ಎಂದು ಸ್ಕೌಟ್‌ ವಿದ್ಯಾರ್ಥಿ ಅನಿಕೇತ್‌ ಕುಮಾರ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next