Advertisement

Surathkal ವಾಹನದಡಿ ಸಿಲುಕಿದ ವಿದ್ಯಾರ್ಥಿ ಪಾರು

12:44 AM Feb 24, 2024 | Team Udayavani |

ಸುರತ್ಕಲ್‌: ಸುರತ್ಕಲ್‌ನ ಶಾಲೆಯೊಂದರ ವಿದ್ಯಾರ್ಥಿಗಳ ಬಸ್‌ನಿಂದ ಇಳಿದ ವಿದ್ಯಾರ್ಥಿ ಅದೇ ಬಸ್ಸಿನ ಚಕ್ರಕ್ಕೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿ ಬಂದ ಘಟನೆ ಕುಳಾಯಿ ಶ್ರೀ ವಿಷ್ಣುಮೂರ್ತಿ ಬಡಾವಣೆಯಲ್ಲಿ ಫೆ. 21ರಂದು ನಡೆದಿದೆ.

Advertisement

ವಿದ್ಯಾರ್ಥಿ ಎದುರಿನಿಂದ ದಾಟಲು ಮುಂದಾಗಿದ್ದನ್ನು ಗಮನಿಸದ ಬಸ್ಸನ್ನು ಚಲಾಯಿಸಿದನು. ಮತ್ತೋರ್ವ ಬಾಲಕ ಇದನ್ನು ಕಂಡು ಬೊಬ್ಬೆ ಹೊಡೆದ ಕಾರಣ ಚಾಲಕ ತತ್‌ಕ್ಷಣ ಬಸ್ಸನ್ನು ನಿಲ್ಲಿಸಿ ದನು. ತರಚಿದ ಗಾಯಗಳಾಗಿವೆ.

ನಾಪತ್ತೆಯಾದವನ ಮೃತದೇಹ ಪತ್ತೆ
ಉಳ್ಳಾಲ: ಕಳೆದ ಸೋಮವಾರ ಮನೆಯಿಂದ ನಾಪತ್ತೆಯಾಗಿದ್ದ ಉಳ್ಳಾಲ ತಾಲೂಕಿನ ಸೋಮೇಶ್ವರ ಮೂಡ ಬಡಾವಣೆ ನಿವಾಸಿ ಗೌತಮ್‌ ಎಂ. (30) ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಫೈನಾನ್ಸ್‌ ಸೀಸರ್‌ ಆಗಿದ್ದ ಗೌತಮ್‌ ಸೋಮವಾರ ಸಂಜೆ ತೊಕ್ಕೊಟ್ಟಿನಲ್ಲಿ ನಡೆದಿದ್ದ ದೈವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದರು.ರಾತ್ರಿ ವೇಳೆ ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟು ತೆರಳಿದ್ದು, ಮರಳಿ ಬರದ ಹಿನ್ನೆಲೆಯಲ್ಲಿ ಮನೆ ಮಂದಿ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಇದೀಗ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಪಾಂಡೇಶ್ವರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮನೆ ಮಂದಿಮೃತದೇಹವನ್ನು ಗುರುತಿಸಿದ್ದಾರೆ. ವಿವಾಹಿತನಾಗಿದ್ದ ಅವರು ಪತ್ನಿಗೆ ವಿಚ್ಛೇದನ ನೀಡಿದ್ದರು. ಅವರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next