Advertisement

ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿ ತಾನೇ ಆತ್ಮಹತ್ಯೆ ಮಾಡ್ಕೊಂಡ

03:45 AM Feb 03, 2017 | Harsha Rao |

ಕೊಟ್ಟಾಯಂ: ಪ್ರೇಮ ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಟ್ಟಾಯಂ ಮೆಡಿಕಲ್‌ ಕಾಲೇಜಿನಲ್ಲಿ ಗುರುವಾರ ಈ ಘಟನೆ ಸಂಭವಿಸಿದೆ.

Advertisement

ಫಿಸಿಯೋಥೆರಪಿ ಕಲಿತಿದ್ದ ಕಾಲೇಜಿನ ಮಾಜಿ ವಿದ್ಯಾರ್ಥಿ ಆದರ್ಶ ಸುನೀಂದ್ರನ್‌ (26) ಮರುಪರೀಕ್ಷೆ ನೆವದಲ್ಲಿ ಕಾಲೇಜಿಗೆ ಆಗಮಿಸಿದ್ದು, ಅಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿ ರಶ್ಮಿ (21)ಯನ್ನು ಭೇಟಿ ಮಾಡಿದ್ದಾನೆ. ಎಲ್ಲರೆದುರೇ ತರಗತಿಯಲ್ಲಿ ಆಕೆ ಮೇಲೆ ಪೆಟ್ರೋಲ್‌ ಸುರಿದಿದ್ದಾನೆ. ಈ ವೇಳೆ ಆಕೆ ಕೂಗಿಕೊಂಡು ಹೊರಗೋಡಿದ್ದು, ಗ್ರಂಥಾಲಯದಲ್ಲಿ ಆದರ್ಶ ಆಕೆಯನ್ನು ತಬ್ಬಿಕೊಂಡಿದ್ದಾನೆ. ಆಕೆ ಅಲ್ಲಿಂದಲೂ ಹೊರಗೋಡಿದ್ದು, ಬೆಂಕಿ ನಂದಿಸಲು ಉಳಿದವರು ಯತ್ನಿಸಿದ್ದರೂ ಇಬ್ಬರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತಂತೆ ಆರೋಪಿ ಆದರ್ಶ ಆಸ್ಪತ್ರೆಯಲ್ಲಿ ಅಂತಿಮ ಹೇಳಿಕೆ ನೀಡಿದ್ದು ಆಕೆ ಮೊದಲು ಪ್ರೇಮಿಸಿ ಬಳಿಕ ನಿರಾಕರಿಸಿದ್ದರಿಂದ ಈ ಕೃತ್ಯವೆಸಗಿದ್ದಾಗಿ ಹೇಳಿ ಮೃತಪಟ್ಟಿದ್ದಾನೆ. ಆದರ್ಶ ಕೊಲ್ಲಂ ಜಿಲ್ಲೆಯವನಾಗಿದ್ದು, ರಶ್ಮಿ ಆಲಪ್ಪುಳ ಜಿಲ್ಲೆಯವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next