Advertisement

ಕಾಂಗ್ರೆಸ್‌ ವರ್ಸಸ್‌ ಕ್ಯಾಪ್ಟನ್‌ ಮಾಜಿ ಸಿಎಂ-ರಾವತ್‌ ವಾಕ್ಸಮರ

10:27 PM Oct 01, 2021 | Team Udayavani |

ಚಂಡೀಗಡ/ನವದೆಹಲಿ: ಪಂಜಾಬ್‌ನಲ್ಲಿ ಕ್ಯಾ.ಅಮರೀಂದರ್‌ ಸಿಂಗ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಛನ್ನಿ ಹೊಸ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ವಾರವೇ ಕಳೆದರೂ, ಕ್ಯಾಪ್ಟನ್‌ ಮತ್ತು ಕಾಂಗ್ರೆಸ್‌ ನಡುವಿನ ಸಮರ ಮುಗಿದಿಲ್ಲ. ಪಕ್ಷದಿಂದ ಅವಮಾನವಾಯಿತು ಎಂದು ಅಮರೀಂದರ್‌ ಸಿಂಗ್‌ ದೂರುತ್ತಿದ್ದರೆ, ಅವರಿಗೆ ಯಾರ ಮಾತನ್ನೂ ಕೇಳುವ ವಿವೇಚನೆಯೇ ಇರಲಿಲ್ಲ ಎಂದು ಕಾಂಗ್ರೆಸ್‌ ಪ್ರತ್ಯಾರೋಪ ಮಾಡಿದೆ.

Advertisement

“ಪಕ್ಷ ಕ್ಯಾ.ಅಮರೀಂದರ್‌ರಿಗೆ ಗೌರವ ಕೊಟ್ಟಿದೆ. ಆದರೆ ಅವರಿಗೆ ಶಾಸಕರಾಗಲಿ ಅಥವಾ ಸಚಿವರಾಗಲಿ ಯಾವುದೇ ಸಲಹೆ ಕೊಡುವುದೂ ಇಷ್ಟವಾಗುತ್ತಿರಲಿಲ್ಲ. ಅವರು ರಾಜ್ಯದಲ್ಲಿ ಪ್ರಮುಖ ನಾಯಕರಾಗಿದ್ದುಕೊಂಡು, ಪಕ್ಷದ ಕೆಲವು ನಿರ್ಧಾರಗಳಿಗೆ ಗೌರವಿಸಬೇಕಿತ್ತು. ಅವರು ಯಾವುದೋ ಒತ್ತಡದಲ್ಲಿರುವಂತೆ ಕಾಣುತ್ತದೆ’ ಎಂದು ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಹರೀಶ್‌ ರಾವಂತ್‌ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮರೀಂದರ್‌ ಸಿಂಗ್‌, “ನಾಲ್ಕೂವರೆ ವರ್ಷದಿಂದ ಅಧಿಕಾರದಲ್ಲಿದ್ದ ಪಕ್ಷ ಈಗ ತನಗೆ ತಾನೇ ತಂದುಕೊಂಡ ಕರುಣಾಜನಕ ಪರಿಸ್ಥಿತಿ ನೋಡಿ ರಾವಂತ್‌ ಇಂಥ ಮಾತಾಡುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:“ಬಿಜೆಪಿ ತುಕ್ಡೆ-ತುಕ್ಡೆ ಮಾಡುತ್ತೇನೆ”: ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್

ಪ್ರಧಾನಿ ಜತೆಗೆ ಭೇಟಿ:
ಈ ನಡುವೆ, ಪಂಜಾಬ್‌ ಸಿಎಂ ಚರಣ್‌ಸಿಂಗ್‌ ಜಿತ್‌ ಛನ್ನಿ ನವದೆಹಲಿಯಲ್ಲಿ  ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಕೃಷಿ ಕಾಯ್ದೆ ಹಿಂಪಡೆಯಬೇಕು, ಹೋರಾಟನಿರತ ರೈತರೊಂದಿಗೆ ಚರ್ಚಿಸಿ ಹೋರಾಟವನ್ನು ಅಂತ್ಯಗೊಳಿಸಬೇಕು ಹಾಗೂ ಭತ್ತವನ್ನು ಅವಧಿಗೆ ಮೊದಲೇ ಖರೀದಿಸಬೇಕು ಎಂದು ಮನವಿ ಮಾಡಿದ್ದಾರೆ.

ಪಂಜಾಬ್‌ ಸ್ಥಿತಿ ಇಲ್ಲ
ಇದೇ ವೇಳೆ, ಛತ್ತೀಸ್‌ಗಡದಲ್ಲಿಯೂ ನಾಯಕತ್ವ ಬದಲಾವಣೆ ನಡೆಯಲಿದೆ ಎಂಬ ವದಂತಿಗಳ ನಡೆಯುವೇ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವಟಿ.ಎಸ್‌.ಸಿಂಗ್‌ ದಿಯೋ ಚತ್ತೀಸ್‌ಗಢದಲ್ಲಿ ಪಂಜಾಬ್‌ನಂಥ ಬಿಕ್ಕಟ್ಟಿನ ಸ್ಥಿತಿ ಇಲ್ಲ. ವರಿಷ್ಠರು ಯಾವ ಸೂಚನೆ ನೀಡುತ್ತಾರೋ ಅದನ್ನು ಪಾಲಿಸುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಕೆಲವು ಶಾಸಕರು ಈಗಾಗಲೇ ನವದೆಹಲಿಯಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next