Advertisement

ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ

04:19 PM Dec 03, 2019 | Team Udayavani |

ಬೀದರ: ಜಿಲ್ಲೆಯ ರೈತರ ಬೇಡಿಕೆಗಳಿಗೆ ಸರ್ಕಾರದಿಂದ ಸ್ಪಂದನೆ ಸಿಗದಿದ್ದರೆ ಡಿ. 11ರಂದು ಜಿಲ್ಲಾದ್ಯಂತ ರೈತರಿಂದ ರಸ್ತಾ ರೋಕೋ ಚಳವಳಿ ನಡೆಸಲಾಗುವುದು ಎಂದು ಜಿಲ್ಲಾ ರೈತ ಸಂಘ ಎಚ್ಚರಿಕೆ ನೀಡಿದೆ.

Advertisement

ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಸೋಮವಾರ ರೈತಮುಖಂಡರು ಜಿಲ್ಲಾಧಿಕಾರಿ ಡಾ|ಎಚ್‌.ಆರ್‌. ಮಹಾದೇವ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ್ದಾರೆ. ರೈತರ ಸಂಕಷ್ಟಗಳಿಗೆ ಆಡಳಿತ ಶೀಘ್ರ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.

ಟನ್‌ ಕಬ್ಬಿಗೆ ಕನಿಷ್ಠ 2500 ರೂ. ಬೆಲೆ ನಿಗದಿಗೊಳಿಸಬೇಕು. ಬೆಳೆ ವಿಮೆ ಕಟ್ಟಿದ ಎಲ್ಲ ರೈತರಿಗೆ ಬೆಳೆ ವಿಮೆ ಕೊಡಬೇಕು. ಯಾವುದೇ ಸಬೂಬು ಹೇಳಿ ರೈತರಿಗೆ ಮೋಸ ಮಾಡಬಾರದು. ರಾಷ್ಟ್ರೀಕೃತ ಬ್ಯಾಂಕಿನವರು

ರೈತರ ಟ್ರ್ಯಾಕ್ಟರ್ ಜಪ್ತಿ ಸಾಲ ವಸೂಲಾತಿ ನೋಟಿಸ್‌ ಕೊಡಬಾರದು. ಜಪ್ತಿ ಮಾಡಿದ ಟ್ರ್ಯಾಕ್ಟರ್ ಅನ್ನು ರೈತರಿಗೆ ವಾಪಸ್‌ ಕೊಡಬೇಕು. ರೈತರ ಎಲ್ಲಾ ಕೃಷಿ ಸಾಲ ಮನ್ನಾ ಮಾಡಬೇಕು. ಕೃಷಿ ಐಪಿ ಸೆಟ್‌ ಹಾಗೂ ಹೊಲದಲ್ಲಿರುವ ಮನೆ,ಕೊಟ್ಟಿಗೆಗಳಿಗೆ ವಿದ್ಯುತ್‌ ಸಂಪರ್ಕ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬೆಲೆ ನಿಗದಿ ಮಾಡಲು ಸಾಧ್ಯವಾಗದ ಕಾರ್ಖಾನೆಗಳು ಹೊರ ರಾಜ್ಯಕ್ಕೆ ಹೋಗುವ ಕಬ್ಬು ತಡೆಯುವಂತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳುಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದುಒತ್ತಾಯಿಸಲಾಗಿದೆ.

Advertisement

ಪ್ರಮುಖರಾದ ಶ್ರೀಮಂತ ಬಿರಾದಾರ, ವಿಠಲರೆಡ್ಡಿ ಆಣದೂರ, ಶಿವರಾಜ ಪಾಟೀಲ ಅತಿವಾಳ, ಬಸವರಾಜ ಅಷ್ಟೂರ, ಶಾಂತಮಕ್ಕ, ಪ್ರಕಾಶ ಬಾವಗೆ, ಷಡಕ್ಷರಿ ಸ್ವಾಮಿ, ನಾಗಯ್ನಾ ಸ್ವಾಮಿ, ಪ್ರಕಾಶ ಅಲ್ಮಾಜೆ ಮತ್ತು ಗೋವಿಂದ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next