Advertisement

ಕುಟುಂಬ ಪಿಂಚಣಿ ಹೆಚ್ಚಿಸಲು ಆಗ್ರಹಿಸಿ ಹೋರಾಟ-ಮನವಿ

04:38 PM Aug 05, 2022 | Team Udayavani |

ರಾಯಚೂರು: ಭಾರತೀಯ ಜೀವ ವಿಮಾ ನಿಗಮ ಮಂಡಳಿಯು ಒಪ್ಪಿರುವಂತೆ ಕುಟುಂಬ ಪಿಂಚಣಿಯನ್ನು ಶೇ.15ರಿಂದ ಶೇ.30ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ವಿಮಾ ಪಿಂಚಣಿದಾರರ ಸಂಘದ ಸದಸ್ಯರು ನಗರದ ಎಲ್‌ ಐಸಿ ವಿಭಾಗೀಯ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಆರೋಗ್ಯ ವಿಮಾ ಯೋಜನೆ ಸೇರುವುದಕ್ಕೆ ಮತ್ತೂಂದು ಅವಕಾಶ ಕಲ್ಪಿಸಬೇಕು. ವೇತನ ಪರಿಷ್ಕರಿಸುವ ಪ್ರತಿ ಹಂತದಲ್ಲಿ ಪಿಂಚಣಿಯನ್ನೂ ಪರಿಷ್ಕರಿಸಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಗೊಳಿಸಿ 1995ರಲ್ಲಿದ್ದ ಪಿಂಚಣಿ ಯೋಜನೆ ಎಲ್ಲ ನೌಕರರಿಗೂ ಜಾರಿ ಮಾಡಬೇಕು ಹಾಗೂ ರೈಲ್ವೆ ಸೇವೆಯಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಸೇವೆ ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.

ಈ ಕೂಡಲೇ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ನೌಕರರ ಅರ್ಥಪೂರ್ಣ ವೇತನ ಪರಿಷ್ಕರಿಸಬೇಕು. ಕುಟುಂಬ ಪಿಂಚಣಿ ಯೋಜನೆ ಜಾರಿಯು ಎರಡು ವರ್ಷ ವಿಳಂಬವಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರವೀಂದ್ರನಾಥ, ಜಂಟಿ ಕಾರ್ಯದರ್ಶಿ ಟಿ.ಜಿ. ವಿಠಲ್‌, ವಿಮಾ ನೌಕರರ ಪ್ರಧಾನ ಕಾರ್ಯದರ್ಶಿ ಎಂ.ರವಿ ಮಾತನಾಡಿದರು. ಪಿಂಚಣಿದಾರರಾದ ಗುರುರಾಜಾಚಾರ್‌ ಜೋಶಿ, ನಾಗೇಂದ್ರಸ್ವಾಮಿ, ತಿಮ್ಮಪ್ಪ ಕಣ್ಣೂರು, ರಾಮು, ಗಾಯತ್ರಿ, ಶಾಂತಕುಮಾರಿ, ಗೋವಿಂದಮ್ಮ, ನಾಗಿರೆಡ್ಡಿ, ಜಂಬಯ್ಯ, ವೆಂಕಟೇಶ, ದುರುಗೇಶ, ವಿಮಾ ನೌಕರರ ಸಂಘದ ಅಧ್ಯಕ್ಷ ಎಂ.ಶರಣಗೌಡ, ಎ. ಶ್ರೀಧರ್‌, ರಾಘವೇಂದ್ರ, ಕೃಷ್ಣಮೂರ್ತಿ, ಜಿ.ಲತಾ, ರಘೋತ್ತಮರಾವ್‌, ಲಿಂಗರಾಜ್‌, ಸಂತೋಷ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next