Advertisement

ಬೀಡಿ ವಿಚಾರಕ್ಕೆ ಜಗಳ ಚಾಕು ಇರಿತ

11:53 AM Jun 27, 2018 | Team Udayavani |

ಬೆಂಗಳೂರು: ಸೇದಲು ಬೀಡಿ ನೀಡದಿದ್ದಕ್ಕೆ ಮೂರು ಯುವಕರ ನಡುವೆ ಜಗಳ ನಡೆದು ಒಬ್ಬನನ್ನು ಚಾಕುವಿನಿಂದ ಇರಿದ ಘಟನೆ ಕಲಾಸಿಪಾಳ್ಯ  ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಲಾಸಿಪಾಳ್ಯ ನಿವಾಸಿ ಕಲಂದರ್‌ ಪಾಷಾ (24) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.

Advertisement

ಕ್ಯಾಂಟರ್‌ ಚಾಲಕ ಸಿದ್ದಿಕ್‌ ಎಂಬಾತನನ್ನು ಬಂಧಿಸಿದ್ದು, ಮತ್ತೂಬ್ಬ ಆರೋಪಿ ಇಸ್ಮಾನ್‌ ತಲೆಮರೆಸಿಕೊಂಡಿದ್ದಾನೆ. ಇಬ್ಬರು ನಗರದ ಮಾರುಕಟ್ಟೆಯಲ್ಲಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ, ಸಿದ್ದಿಕ್‌ ಮಾರುಕಟ್ಟೆಗೆ ಹಣ್ಣು, ತರಕಾರಿ ತರುವ ಕ್ಯಾಂಟರ್‌ ಚಾಲಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಾಸಿಪಾಳ್ಯದ ಸಪೋಟಾ ಮಾರುಕಟ್ಟೆಯಲ್ಲಿ ಮಂಗಳವಾರ ನಸುಕಿನ ವೇಳೆ ಕ್ಯಾಂಟರ್‌ ಚಾಲಕ ಸಿದ್ದಿಕ್‌ ತರಕಾರಿ ಇಳಿಸುವಾಗ ಕೂಲಿ ಕಾರ್ಮಿಕ ಕಲಂದರ್‌ ಪಾಷಾ ಬಳಿ ಬೀಡಿ ಕೇಳಿದ್ದ. ಇದಕ್ಕೆ ಕಲಂದರ್‌ ನಿರಾಕರಿಸಿದಾಗ, ನೀವು ಕೇಳಿದಾಗ ಕೊಡುತ್ತೇನೆ.

ನಾನು ಕೇಳಿದರೆ ಕೊಡುವುದಿಲ್ಲವೇ ಎಂದು ಪ್ರಶ್ನಿಸಿ ಜಗಳ ಆರಂಭಿಸಿದ್ದಾನೆ. ಇದೇ ವೇಳೆ ಸಿದ್ದಿಕ್‌ ಸ್ನೇಹಿತ ಇಸ್ಮಾನ್‌ ಕೂಡ ಜತೆ ಸೇರಿದ್ದಾನೆ. ಇದು ವಿಕೋಪಕ್ಕೆ ತಿರುಗಿದೆ. ಕೊನೆಗೆ ಇಬ್ಬರೂ ಸೇರಿ ಕಲಂದರ್‌ ಬಲಗಾಲು ಮತ್ತು ಕೈಗೆ ಚಾಕುವಿನಿಂದ ಇರಿದಿದ್ದಾರೆ. ಕಲಾಸಿಪಾಳ್ಯ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next