Advertisement

ಚುನಾವಣೆಯಶಸ್ಸಿಗೆ ಶ್ರಮಿಸಿ

02:17 PM Apr 12, 2019 | pallavi |
ದೊಡ್ಡಬಳ್ಳಾಪುರ: ಮತಗಟ್ಟೆ ಅಧಿಕಾರಿಗಳು ತರಬೇತಿ ಶಿಬಿರದಲ್ಲಿ ಚುನಾವಣಾ ಪ್ರಕ್ರಿಯೆಗಳ ಕುರಿತು ಪೂರ್ಣಮಾಹಿತಿ ತಿಳಿದುಕೊಳ್ಳ ಬೇಕು. ಯಾವುದೇ ಅನುಮಾನಗಳಿದ್ದರೂ ತರಬೇತಿ ಕೇಂದ್ರದಲ್ಲಿ ಬಗೆಹರಿಸಿಕೊಂಡು, ಚುನಾವಣೆ ಯಶಸ್ವಿಯಾಗಿ ನಡೆಯುವಂತೆ ಕಾರ್ಯಪ್ರವೃತ್ತರಾಗಬೇಕೆಂದು ಬೆಂ.ಗ್ರಾ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ
ಕರೀಗೌಡ ಸೂಚನೆ ನೀಡಿದರು.
 ನಗರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ವಿಧಾನಸಭಾ ಚುನಾವಣೆ ಮತಗಟ್ಟೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಮತದಾನ ಪ್ರಕ್ರಿಯೆ, ಚುನಾವಣಾ ಆಯೋಗದ ನೀತಿ, ನಿಯಮಗಳ ಕುರಿತ ಎರಡನೇ ಸುತ್ತಿನ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತರ ನೀಡದ ಸಿಬ್ಬಂದಿಗೆ ತರಾಟೆ: ತರಬೇತಿ ಕೊಠಡಿಗಳಿಗೆ ಭೇಟಿ ನೀಡಿದ ಜಿಲ್ಲಾ ಧಿಕಾರಿಗಳು, ತರಬೇತಿಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ ಮತದಾನದ ದಿನ ಮತಗಟ್ಟೆಯಲ್ಲಿ ಭರ್ತಿ ಮಾಡಬೇಕಿರುವ ವಿವಿಧ ನಮೂನೆ
ಯ ಫಾರಂಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ದಿಢೀರನೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ತಬ್ಬಿಬ್ಟಾದ ಸಿಬ್ಬಂದಿಯನ್ನು ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು.
ನೊಟೀಸ್‌ ಜಾರಿಗೆ ಸೂಚನೆ: ಎರಡನೇ ಸುತ್ತಿನ ತರಬೇತಿಯಲ್ಲಿ ಭಾಗವಹಿಸಿದ್ದರು ಸಹ ಮತದಾನದ ದಿನ ಮತಗಟ್ಟೆಯಲ್ಲಿ ಭರ್ತಿ ಮಾಡಬೇಕಿರುವ ಫಾರಂಗಳ ಬಗ್ಗೆ ಸರಿಯಾದ ಮಾಹಿತಿ ಪಡೆದಿಲ್ಲ. ಹೀಗಾದರೆ ತರಬೇತಿ ನೀಡಿಯೂ ಪ್ರಯೋಜನವೇನು ಎಂದು ಪ್ರಶ್ನಿಸಿದರು. ತರಬೇತಿಯಲ್ಲಿ ಭಾಗವಹಿಸಿದ್ದ ಕೆಲ ಸಿಬ್ಬಂದಿ ಮತಗಟ್ಟೆಯಲ್ಲಿನ ನಿಯಮಗಳ ಪಾಲನೆ ಕುರಿತು ಜಿಲ್ಲಾಧಿಕಾರಿಗಳು ಕೇಳಿದ ಯಾವುದೇ ಪ್ರಶ್ನೆಗೂ ಸರಿ ಯಾದ ಉತ್ತರವನ್ನೇ ನೀಡಲಿಲ್ಲ. ಇಂತಹ ಸಿಬ್ಬಂದಿಗೆ ಕಾರಣ ಕೇಳಿ ನೊಟೀಸ್‌ ಜಾರಿ ಮಾಡುವಂತೆ ತಹಶೀಲ್ದಾರ್‌ರಿಗೆ ಸೂಚನೆ ನೀಡಿದರು. ಮತಗಟ್ಟೆಗೆ ಸಂಬಂಧಿಸಿದಂತೆ
ಕೆಲ ಸಿಬ್ಬಂದಿ ನೀಡಿದ ಸರಿಯಾದ ಉತ್ತರ ‌ದಿಂದ ಸಂತಸಗೊಂಡ ಡೀಸಿ ಉತ್ತರ ಹೇಳಿದ ಸಿಬ್ಬಂದಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಪಾರದರ್ಶಕ ಚುನಾವಣೆಗೆ ಸಂಕಲ್ಪ: ಸುಗಮ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಮತಗಟ್ಟೆ ಅಧಿಕಾರಿಗಳ ಪಾತ್ರ ಮಹತ್ವ ದ್ದಾಗಿದೆ. ತರಬೇತಿ ಕೇಂದ್ರಗಳಲ್ಲಿ ನೀಡುವ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ನಿಯಮ ತಿಳಿದಿಲ್ಲ ಎಂದು ಕಾನೂನು ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣಾ ಸೆಕ್ಟರ್‌ ಅಧಿಕಾರಿಗಳು ಈ ಕುರಿತು ಅಗತ್ಯ ಸೂಚನೆಗಳನ್ನು ನೀಡಬೇಕೆಂದು ಹೇಳಿದರು.
1,600 ಅಧಿಕಾರಿಗಳಿಗೆತರ ಬೇತಿ: ಉಪ ವಿಭಾಗಾಧಿಕಾರಿ ಸಿ.ಮಂಜುನಾಥ್‌ ಮಾತನಾಡಿ, ಎರಡನೇ ಸುತ್ತಿನ ತರಬೇತಿಯಲ್ಲಿ 1,600 ಮತಗಟ್ಟೆ ಅಧಿಕಾರಿಗಳಿಗೆತರ ಬೇತಿ ನೀಡಲಾಗುತ್ತಿದೆ. ಜಿಲ್ಲೆಯ 4 ತಾಲೂಕುಗಳಿಂದ ಆಗಮಿಸಿರುವ ಅಧಿಕಾರಿಗಳಿಗೆ 24 ಸೆಕ್ಟರ್‌ ಅಧಿಕಾರಿಗಳು, 4 ಮಂದಿ ಮಾಸ್ಟರ್‌ತರ ಬೇತುದಾರರುತರ ಬೇತಿ ನೀಡುತ್ತಿದ್ದಾರೆ.
ತರಬೇತಿಗೆ ಮಕ್ಕಳೊಂದಿಗೆ ಬರುವ ಮಹಿಳಾ ಸಿಬ್ಬಂದಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ತರಬೇತಿ ಕೇಂದ್ರದಲ್ಲಿ ಶಿಶು ವಿಹಾರ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಚುನಾವಣಾ ನಿಯಮ ಪಾಲಿಸಿ: ಈ ಬಾರಿ ವಿಧಾನಸಭಾ ಚುನಾವಣೆಯ ಮತದಾನ ಮುಂಜಾನೆ 7 ರಿಂದ ಸಂಜೆ 6 ಗಂಟೆಯ ತನಕ ನಡೆಯಲಿದೆ. ಪ್ರತಿ ಮತಗಟ್ಟೆಯಲ್ಲೂ ಮುಂಜಾನೆ 6 ಗಂಟೆಗೆ ಮತದಾನ ಕೇಂದ್ರವನ್ನು ಸಿದ್ಧಗೊಳಿಸಿ ಅಣಕು ಮತದಾನ ನಡೆಸಬೇಕು. ಮತಯಂತ್ರ ಸುಗಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಾತ್ರಿ ಮಾಡಿ ಕೊಂಡು ನಂತರ 7 ಗಂಟೆಗೆ ಮತದಾನ ಪ್ರಾರಂಭಿಸಬೇಕು. ಈ ಬಾರಿಯ ಚುನಾವಣೆಯಲ್ಲೂ ಮತದಾನ ಖಾತ್ರಿಯಂತ್ರ ಮತದಾರ ನಿಗೆ ತನ್ನ ಮತ ತಾನು ಚಲಾಯಿಸಿರುವ ಅಭ್ಯರ್ಥಿಗೆ ಚಲಾವಣೆಯಾಗಿದೆಯೇ ಎಂಬುದನ್ನು ಭೌತಿಕವಾಗಿ ಖಾತರಿಪಡಿಸುವ ಸಾಧನವಾಗಿದೆ. ದಿವ್ಯಾಂಗರನ್ನು ಮತಗಟ್ಟೆಗೆ ಕರೆತರಲು ಮಾರ್ಗಸೂಚಿ ಸಿದ್ಧಪಡಿಸಲಾಗಿದೆ ಎಂದರು.
 ಮತದಾನ ದಿನದಂದು ಮತಗಟ್ಟೆ ಅಧ್ಯಾಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಉಳಿದ ಮತಗಟ್ಟೆ ಅಧಿಕಾರಿಗಳ ಕರ್ತ ವ್ಯಗಳ ಬಗ್ಗೆ ಸೆಕ್ಟರ್‌ ಅಧಿಕಾರಿಗಳು ಪ್ರಾತ್ಯಕ್ಷಿತೆ ಮೂಲಕ ಮಾಹಿತಿ ನೀಡಿದರು.
 ಅಂಚೆ ಮತದಾನ ಕೇಂದ್ರ: ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮದ ಅಂಗವಾಗಿ ಬೆಂ.ಗ್ರಾ.ಜಿಲ್ಲೆಯ ಚುನಾವಣಾ ಸಿಬ್ಬಂದಿಗೆ ಅನಕೂಲವಾಗುವ ದೃಷ್ಟಿಯಿಂದ ಅಂಚೆ ಮತದಾನ ಕೇಂದ್ರ ತೆರೆಯಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿರುವ ಚುನಾವಣಾ ಸಿಬ್ಬಂದಿಗೆ ಈ ಕೇಂದ್ರದಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಂಚೆ ಮತ ಪೆಟ್ಟಿಗೆಗಳನ್ನು ಸೀಲ್‌ ಮಾಡಿ, ಚುನಾವಣೆಯ ಎಣಿಕೆ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಹಶೀಲ್ದಾರ್‌ ಎಂ.ಕೆ. ರಮೇಶ್‌ ತಿಳಿಸಿದರು. ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಎಂ. ದ್ಯಾಮಪ್ಪ, ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ್‌ ರಾಜೀವ್‌ ಲೋಚನ ಮುಂತಾದವರು ಭಾವಹಿಸಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next