Advertisement

ಮಲೇರಿಯಾ ಮುಕ್ತ ಜಿಲ್ಲೆಗೆ ಶ್ರಮಿಸಿ: ಸಿಇಒ ಇಕ್ರಂ

12:36 PM Jul 16, 2020 | mahesh |

ರಾಮನಗರ: 2019ನೇ ಸಾಲಿನಲ್ಲಿ 5 ಮತ್ತು 2020ರಲ್ಲಿ ಈವರೆಗೆ 2 ಮಲೇರಿಯಾ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಇನ್ನಷ್ಟು ಶ್ರಮಿಸಿದರೆ ಬಹುಶಃ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಶೂನ್ಯಕ್ಕೆ ತರಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಂದಾಗಬೇಕು ಎಂದು ಜಿಪಂ ಸಿಇಒ ಇಕ್ರಂ ತಾಕೀತು ಮಾಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಮಲೇರಿಯಾ ವಿರೋಧ ಮಾಸಾಚರಣೆ ಮತ್ತು ಡೆಂಗ್ಯೂ ದಿನಾಚರಣೆ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಲೇರಿಯಾ, ಡೆಂಗ್ಯೂ, ಚಿಕುನ್‌ಗುನ್ಯಾ, ರೋಗಗಳು ಸೊಳ್ಳೆಗಳಿಂದ ಹರಡುತ್ತದೆ. ಸೊಳ್ಳೆಗಳು ನಿಂತ ನೀರಿನಲ್ಲಿ ಬೆಳೆಯುವುದರಿಂದ ಸಾರ್ವಜನಿಕರು ತಮ್ಮ ಸುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳ ಬೇಕಾಗಿದೆ. ಈ ವಿಚಾರದಲ್ಲಿ ಜನ ಜಗೃತಿ ಅಗತ್ಯವಿದೆ ಎಂದರು.

ಕೋವಿಡ್‌-19 ನಿಯಂತ್ರಿಸುವ ಬಗ್ಗೆ, ಕಸ ವಿಲೇವಾರಿ ಆಟೋಗಳಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ. ಕೋವಿಡ್‌ -19 ಜೊತೆಗೆ ಮಲೇರಿಯಾ ಇತರೆ ಸಾಂಕ್ರಾಮಿಕ ರೋಗ ತಡೆ ಬಗ್ಗೆ ಪ್ರಚಾರ ಕೈಗೊಳ್ಳಿ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಾರ್ವ ಸಮೀಕ್ಷೆ ಕೈಗೊಳ್ಳಿ. ಅದರೊಂದಿಗೆ ಜಾಗೃತಿ ಕರಪತ್ರ ವಿತರಿಸಿ ಎಂದು ಸಲಹೆ ಕೊಟ್ಟರು. ನಗರದ ಸ್ಥಳೀಯ ಸಂಸ್ಥೆಗಳು, 3 ದಿನಗಳಿಗೊಮ್ಮೆ ವ್ಯವ ಸ್ಥಿತವಾಗಿ ಫಾಗಿಂಗ್‌ ಮಾಡುವಂತೆ ಆರೋಗ್ಯ ಇಲಾಖೆ
ಅಧಿಕಾರಿಗಳು ಸಲಹೆ ಮಾಡಬೇಕು. ಮೀನುಗಾರಿಕೆ ಇಲಾಖೆ ಅವರು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯವಾಗಿ ಕಾರ್ಯ ನಿರ್ವಹಿಸಿ ಕೆರೆ ಹಾಗೂ ತೊಟ್ಟಿಗಳಲ್ಲಿ ಲಾರ್ವ ಬೆಳೆಯ ದಂತೆ ತಡೆಯಲು ವಿಶೇಷ ಮೀನು ಬಿಡುವಂತೆ ತಿಳಿಸಿದರು.

ಪಶುಸಂಗೋಪನೆ ಇಲಾಖೆ ಅವರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗಲೆಲ್ಲ ಮಲೇರಿಯಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ನೀರು ಸಂಗ್ರಹಣೆಗೆ ಅವಕಾಶವಾಗದಂತೆ ತಿಳಿವಳಿಕೆ ಮೂಡಿಸಿ, ರೋಗ ಹರಡುವ ಸನ್ನಿವೇಶಗಳು ಕಂಡರೆ ತಕ್ಷಣ ಆರೋಗ್ಯ ಇಲಾಖೆಗೆ ತಿಳಿಸಿ ಎಂದು ಸೂಚಿಸಿದರು.

ಕೆಎಂಎಫ್ ಅಡಿ ಕಾರ್ಯನಿರ್ವಸುತ್ತಿರುವ ಸೊಸೈಟಿಗಳ ಎದುರು ಜಾಗೃತಿ ಪೋಸ್ಟರ್‌ ಅಳವಡಿಸಿದಲ್ಲಿ ಹೆಚ್ಚಿನ ಪ್ರಚಾರ ದೊರಕುತ್ತದೆ. ತಾಲೂಕು ಮಟ್ಟದಲ್ಲಿ ಸಭೆ
ಆಯೋಜಿಸಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಬಗ್ಗೆ ಚರ್ಚಿಸುವಂತೆ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್‌, ಆರೋಗ್ಯ ಇಲಾಖೆ ಡಾ.ಪ್ರಸನ್ನಕುಮಾರ್‌, ಡಾ.ಪದ್ಮಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next