Advertisement

ಕೊಪ್ಪಳದಲ್ಲಿ ಅನಗತ್ಯ ಸುತ್ತಾಡುವ ವಾಹನಗಳ ಜಪ್ತಿ

01:05 PM May 10, 2021 | Team Udayavani |

ಕೊಪ್ಪಳ: ಸೋಮವಾರ ಬೆಳಗಿನ ವೇಳೆ ಜನ ದಟ್ಟಣೆಯಿಂದ ಕೂಡಿದ್ದ ಕೊಪ್ಪಳ ನಗರದಲ್ಲಿ ಮಧ್ಯಾಹ್ನದ ವೇಳೆ ಪೊಲೀಸರು ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ನಗರದ ವಿವಿಧ ರಸ್ತೆಗಳಲ್ಲಿ ಅನಗತ್ಯ ಸುತ್ತಾಡುವ ಬೈಕ್ ಗಳನ್ನು ವಶಕ್ಕೆ ಪಡೆಯುವ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ.

Advertisement

ನಗರದ ತಹಶೀಲ್ದಾರ್ ಕಚೇರಿ ಸರ್ಕಲ್, ಅಶೋಕ ವೃತ್ತ ಸೇರಿ ಇತರೆ ರಸ್ತೆಯಲ್ಲೂ ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದಾರೆ.

ಇದನ್ನೂ ಓದಿ:ಲಾಕ್ ಡೌನ್ ನಿಯಮ ಪಾಲಿಸದ ಗ್ರಾಹಕರು : ಪೊಲೀಸರಿಂದ ಎಚ್ಚರಿಕೆ

ಅನಗತ್ಯ ಸುತ್ತಾಟ ನಡೆಸುವ ಬೈಕ್ ಗಳನ್ನು ಹಿಡಿದು ದಂಡ ಹಾಕುವ ಬದಲು ಜಪ್ತಿ ಮಾಡಿ ನೇರ ಸಂಚಾರಿ ಪೊಲೀಸ್ ಠಾಣೆಗೆ ಕಳುಹಿಸುತ್ತಿದ್ದಾರೆ. ಆದರೆ ಕೆಲವು ಅಗತ್ಯ ಕಾರಣ ನೀಡಿದರೂ ಸಹಿತ ಪೊಲೀಸರು ಎಲ್ಲ ವಾಹನಗಳನ್ನು ಹಿಡಿದು ಪೊಲೀಸ್ ಠಾಣೆಗೆ ಕಳುಹಿಸುತ್ತಿದ್ದಾರೆ.

ತಹಶೀಲ್ದಾರ್ ವೃತ್ತದಲ್ಲಿ ಡಿಎಸ್ಪಿ ಗೀತಾ ಬೇವಿನಹಾಳ ಅವರೇ ಮುಂದೆ ನಿಂತು ಬಿಗಿ ಬಂದೋಬಸ್ತ್ ಗೆ ಸೂಚನೆ ನೀಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next