Advertisement
ಜಂಬೂಸವಾರಿ ಮುಗಿದ ಹಿನ್ನೆಲೆಯಲ್ಲಿ ಅರಮನೆಗೆ ಬೇಟಿ ನೀಡಿದ ಹಲವು ಪ್ರವಾಸಿಗರು ಅರಮನೆಯಲ್ಲಿರುವ ದಸರಾ ಆನೆಗಳನ್ನು ವೀಕ್ಷಿಸಲು ಮುಗಿಬಿದ್ದರು. ಪ್ರವಾಸಿಗರು ಆನೆಗಳ ಹತ್ತಿರಕ್ಕೆ ತೆರಳಿ ಅವುಗಳಿಗೆ ತೊಂದರೆ ನೀಡಬಾರದೆಂಬ ಕಾರಣಕ್ಕೆ ಬ್ಯಾರಿಕೇಡ್ಗಳನ್ನು ಅಳವಡಿಸಿ, ಹಗ್ಗ ಕಟ್ಟಲಾಗಿತ್ತು. ಹೀಗಾಗಿ ಆನೆಗಳನ್ನು ನೋಡಲು ಬರುತ್ತಿದ್ದ ಪ್ರವಾಸಿಗರು ದೂರದಿಂದಲೇ ಆನೆಗಳ ಫೋಟೋ ತೆಗೆದುಕೊಂಡು ಖುಷಿಪಟ್ಟರು.
Related Articles
Advertisement
ಇದನ್ನು ಗಮನಿಸಿದ ಇನ್ನಿತರೆ ಮಾವುತರು ಹಾಗೂ ಕಾವಾಡಿಗಳು ಒಂದುಗೂಡಿ ಯುವಕರಿಗೆ ಬುದ್ದಿ ಹೇಳಿದ್ದಾರೆ. ಆದರೂ ಸುಮ್ಮನಾಗದ ಯುವಕರು ತಮ್ಮ ಉದ್ದಟತನದ ವರ್ತನೆಯನ್ನು ಮುಂದುವರಿಸಿದ ವೇಳೆ ಯುವಕರಿಗೆ ಕಪಾಳ ಮೋಕ್ಷ ಮಾಡಿ, ಬುದ್ದಿ ಕಲಿಸಿದ್ದಾರೆ.
ಇದರಿಂದ ಯುವಕರು ಹಾಗೂ ಮಾವುತರು-ಕಾವಾಡಿಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಎರಡು ಗುಂಪನ್ನು ಸಮಾಧಾನಪಡಿಸಿ ಕಳುಹಿಸಿದರು. ಈ ಎಲ್ಲಾ ಘಟನೆಗಳು ನಡೆದ ಬಳಿಕ ಆನೆಗಳ ಹತ್ತಿರಕ್ಕೆ ಯಾರು ಹೋಗದಂತೆ ಮತ್ತೂಂದು ಹಗ್ಗ ಕಟ್ಟಿ, ಸ್ಥಳಕ್ಕೆ ಪೊಲೀಸ್ ಪೇದೆಗಳನ್ನು ನಿಯೋಜಿಸಲಾಯಿತು.