Advertisement

ಸೇನೆಗೆ ಶಕ್ತಿ ತುಂಬುವ ಕೆಲಸ ಆಗಲಿ: ಡಾ|ಹೆಗ್ಗಡೆ

01:00 AM Feb 24, 2019 | Harsha Rao |

ಕುಂಬಳೆ: ದೇಶದ ಗಡಿಯಲ್ಲಿ ಅಶಾಂತಿ ತಾಂಡವವಾಡುತ್ತಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಲು ದೇಶವನ್ನಾಳುವ ನಾಯಕರಿಗೆ ಹಾಗೂ ಸೈನಿಕರಿಗೆ ಶಕ್ತಿ ತುಂಬುವ  ಕೆಲಸ ನಮ್ಮಿಂದಾಗ ಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.

Advertisement

ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ವಿಶ್ವಜಿತ್‌ ಅತಿರಾತ್ರ ಸೋಮಯಾಗದಂಗವಾಗಿ ಜರಗಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಣಿಲ ಶ್ರೀ ಮೋಹನದಾಸ  ಪರಮಹಂಸ ಸ್ವಾಮೀಜಿ, ಶ್ರೀ ಯೋಗಾನಂದ ಸ್ವಾಮೀಜಿ, ಬಾಕೂìರು ಶ್ರೀ ವಿಶ್ವಸಂತೋಷಿ ಭಾರತೀ  ಗುರೂಜಿ, ಕಟೀಲು ಕ್ಷೇತ್ರದ ಅನಂತ ಪದ್ಮನಾಭ ಆಸ್ರಣ್ಣ, ಉಪಸ್ಥಿತರಿದ್ದರು.
ಶಾಸಕ ಉಮಾನಾಥ ಕೋಟ್ಯಾನ್‌, ಪ್ರಮುಖರಾದ ಪಿ.ಎಸ್‌. ಪ್ರಕಾಶ್‌, ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಜಯದೇವ ಖಂಡಿಗೆ, ಮಹಾ ಬಲೇಶ್ವರ ಭಟ್‌, ಡಾ| ನಾರಾಯಣ್‌ ಬೆಂಗಳೂರು, ಸಂಜೀವ ಶೆಟ್ಟಿ ತಿಂಬರ,
ಡಾ| ಶ್ರೀಧರ ಭಟ್‌ ಅತಿಥಿಗಳಾಗಿ ದ್ದರು. ಕೆ. ಮೋನಪ್ಪ  ಭಂಡಾರಿ ಪ್ರಸ್ತಾವನೆಗೈದರೆ, ಎಂ.ಬಿ. ಪುರಾಣಿಕ್‌ ಸ್ವಾಗ ತಿಸಿ, ಡಾ| ಜಯಪ್ರಕಾಶ್‌ ನಾರಾಯಣ್‌ ವಂದಿಸಿದರು. ಪುರುಷೋತ್ತಮ ಭಂಡಾರಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next