Advertisement

Heavy Rains: ತೇಲುವ ಕಾರುಗಳು! ಹಿಮಾಚಲ, ದೆಹಲಿ ಬಳಿಕ ಗುಜರಾತ್‌, ಮುಂಬೈನಲ್ಲಿ ಮೇಘಸ್ಫೋಟ

01:29 PM Jul 19, 2023 | Team Udayavani |

ಗುಜರಾತ್/ಮಹಾರಾಷ್ಟ್ರ: ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ್‌ ನಲ್ಲಿ ಧಾರಾಕಾರ ಮಳೆ, ಪ್ರವಾಹ ಮುಂದುವರಿದಿರುವ ನಡುವೆಯೇ ಇದೀಗ ಗುಜರಾತ್‌ ಮತ್ತು ಮುಂಬೈ ವರ್ಷಧಾರೆಗೆ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Free tomatoes: ಇವರ ಆಟೋದಲ್ಲಿ ಪ್ರಯಾಣಿಸಿದರೆ ಟೊಮ್ಯಾಟೋ ಫ್ರೀ.. ಕಂಡಿಷನ್‌ ಅಪ್ಲೈ

ಗುಜರಾತ್‌ ರಾಜ್ಯದಲ್ಲಿ ಕಳೆದ ಕೆಲವು ಗಂಟೆಗಳಲ್ಲಿ ಸುರಿದ ಧಾರಾಕಾರ (300 ಮಿಲಿ ಮೀಟರ್)‌ ಮಳೆಗೆ ರಾಜ್‌ ಕೋಟ್‌, ಸೂರತ್‌ ಮತ್ತು ಗಿರ್‌ ಸೋಮನಾಥ್‌ ಜಿಲ್ಲೆಗಳು ಜಲಾವೃತಗೊಂಡಿದ್ದು, ನೂರಾರು ಕಾರುಗಳು ನೀರಿನಲ್ಲಿ ತೇಲುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ರಾಜ್ ಕೋಟ್‌, ಸೂರತ್‌, ಗಿರ್‌ ಸೋಮನಾಥ್‌ ಜಿಲ್ಲೆಗಳಲ್ಲಿ ಜಲಾವೃತಗೊಂಡ ಪ್ರದೇಶದಲ್ಲಿ ಕಾರುಗಳು ನೀರಿನಲ್ಲಿ ತೇಲುತ್ತಿದ್ದು, ಅಂಗಡಿ-ಮುಂಗಟ್ಟುಗಳನ್ನು ಬಂದ್‌ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

ಮುಂದಿನ ಕೆಲವು ದಿನಗಳ ಕಾಲ ಸೌರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಗುಜರಾತ್‌ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಂಗಳವಾರ (ಜು.18) ಬೆಳಗ್ಗೆ 6ಗಂಟೆಯಿಂದ ಕೇವಲ 14 ಗಂಟೆಗಳ ಅವಧಿಯಲ್ಲಿ ಗಿರ್‌ ಸೋಮನಾಥ್‌ ಜಿಲ್ಲೆಯ ಸೂತ್ರಪಾಡಾ ತಾಲೂಕಿನಲ್ಲಿ 345 ಮಿಲಿ ಮೀಟರ್‌ ದಾಖಲೆಯ ಮಳೆಯಾಗಿದೆ. ರಾಜ್‌ ಕೋಟ್‌ ಜಿಲ್ಲೆಯ ಧೋರಾಜಿ ತಾಲೂಕಿನಲ್ಲಿ 250 ಮಿಲಿ ಮೀಟರ್‌ ಮಳೆಯಾಗಿರುವುದಾಗಿ ವರದಿ ತಿಳಿಸಿದೆ.

ಮುಂಬೈನಲ್ಲೂ ಭಾರೀ ಮಳೆ:

ಕಳೆದ 24 ಗಂಟೆಯಲ್ಲಿ ಸುರಿದ ಭಾರೀ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿ ಹೋಗಿದೆ. 24ಗಂಟೆಯಲ್ಲಿ 100 ಮಿಲಿ ಮೀಟರ್‌ ಮಳೆಯಾಗಿದ್ದು, ಮುಂಬೈ ಮತ್ತು ಥಾಣೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ರಾಯ್‌ ಗಢ್‌, ಪುಣೆ ಮತ್ತು ಪಾಲ್ಘಾಟ್‌ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಾಖಲೆಯ ಮಳೆ, ಗಾಳಿಗೆ 26 ಮರದ ಕೊಂಬೆಗಳು ಮುರಿದು ಬಿದ್ದಿದ್ದು, ನಾಲ್ಕು ಆವರಣದ ಗೋಡೆಗಳು ಕುಸಿದು ಬಿದ್ದಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next