Advertisement

Indrali: ಬೀದಿದೀಪ ದುರಸ್ತಿ ಕಾರ್ಯ: ಶೀಘ್ರ ಬೀದಿದೀಪ ವ್ಯವಸ್ಥೆ

03:13 PM Aug 08, 2024 | Team Udayavani |

ಉಡುಪಿ: ಕಳೆದ ಹಲವಾರು ದಿನಗಳಿಂದ ಇಂದ್ರಾಳಿ ಪರಿಸರದಲ್ಲಿ ಬೀದಿದೀಪ ಸಮಸ್ಯೆಯಿಂದ ಸ್ಥಳೀಯರು ತೊಂದರೆ ಅನುಭವಿಸಿದ್ದು, ಇದೀಗ ಬೀದಿದೀಪ ನಿರ್ವಹಣೆ ಕೆಲಸ ನಡೆಯುತ್ತಿದ್ದು, ಬಹುತೇಕ ಕಡೆಗಳಲ್ಲಿ ಬೀದಿದೀಪ ಕಾರ್ಯನಿರ್ವಹಿಸುತ್ತಿದೆ. ನಿರಂತರ ಒಂದು ತಿಂಗಳು ಬೀದಿದೀಪ ಮತ್ತು ಮನೆಗಳಲ್ಲಿ ವಿದ್ಯುತ್‌ ಸಂಪರ್ಕ ಪೂರೈಕೆಯಲ್ಲಿ ವ್ಯತ್ಯಯವಿತ್ತು.

Advertisement

ಈ ಬಗ್ಗೆ ಉದಯವಾಣಿ ಸುದಿನ ವಿಸ್ತೃತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದೀಗ ನಗರಸಭೆ ವ್ಯಾಪ್ತಿ ಬೀದಿದೀಪ ನಿರ್ವಹಣೆ ಮಾಡುವ ಗುತ್ತಿಗೆ ಸಂಸ್ಥೆ ವತಿಯಿಂದ ಹಲವೆಡೆ ದುರಸ್ತಿ ಕಾರ್ಯ ನಡೆಸಿದ್ದು, ಕೆಲವು ಕಡೆಗಳಲ್ಲಿ ಇನ್ನು ಕೆಲಸ ನಡೆಯುತ್ತಿದ್ದು, ಶೀಘ್ರ ಬೀದಿದೀಪ ಸರಿಪಡಿಸಿ ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಿಬಂದಿ ತಿಳಿಸಿದ್ದಾರೆ. ಕಡೆಗಳಲ್ಲಿ ಗಾಳಿ- ಮಳೆಯಿಂದಾಗಿ ಮನೆಗಳಿಗೂ ಹಲವು ದಿನ ವಿದ್ಯುತ್‌ ಪೂರೈಕೆ ಸಮಸ್ಯೆಯಾಗಿದ್ದು, ಮೆಸ್ಕಾಂ ವತಿಯಿಂದ ರೀಸ್ಟೋರಿಂಗ್‌ ವರ್ಕ್‌ ಮುಗಿದಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next