Advertisement

ಪಪಂ ಅಧ್ಯಕ್ಷರ ಕೊಠಡಿಯಲ್ಲಿ ಶ್ವಾನ ಆವಾಂತರ!

02:57 PM Jun 01, 2022 | Team Udayavani |

ಮೊಳಕಾಲ್ಮೂರು: ಬೀದಿನಾಯಿ ದಾಳಿಯಿಂದ ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿನ ಅಧ್ಯಕ್ಷರ ಕೊಠಡಿಯಲ್ಲಿದ್ದ ಕುರ್ಚಿ ಹಾಗೂ ಇತರ ವಸ್ತುಗಳು ಚಿಂದಿಯಾದ ಘಟನೆ ನಡೆದಿದೆ.

Advertisement

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಕಳೆದ ಶುಕ್ರವಾರ ಕೆಲಸದ ಅವಧಿಯ ಬಳಿಕ ಸಿಬ್ಬಂದಿಗಳು ಕಚೇರಿಯ ಬಾಗಿಲು ಹಾಕಿಕೊಂಡು ಹೋಗಿದ್ದರು. ಇದೇ ಸಂದರ್ಭದಲ್ಲಿ ಬೀದಿನಾಯಿಯೊಂದು ಅಧ್ಯಕ್ಷರ ಕೊಠಡಿ ಒಳಗೆ ಸೇರಿಕೊಂಡಿರುವುದನ್ನು ಯಾರೂ ಗಮನಿಸಿರಲಿಲ್ಲ. ನಾಲ್ಕನೇ ಶನಿವಾರ ಮತ್ತು ಭಾನುವಾರ ರಜಾ ಇದ್ದಿದ್ದರಿಂದ ಕಚೇರಿ ಬಾಗಿಲು ತೆರೆದಿರಲಿಲ್ಲ. ಹಾಗಾಗಿ ಪಪಂ ಅಧ್ಯಕ್ಷರ ಕೊಠಡಿಯಲ್ಲಿದ್ದ ಬೀದಿನಾಯಿ ರಜಾ ದಿನಗಳಲ್ಲಿ ಅನ್ನ-ನೀರಿಲ್ಲದೆ ಪರದಾಡುವಂತಾಗಿತ್ತು. ಹಸಿವು ತಾಳಲಾಗದೆ ಪಪಂ ಅಧ್ಯಕ್ಷರು ಕೂರುವ ಕುರ್ಚಿ ಹಾಗೂ ಕಿಡಕಿಗೆ ಹಾಕಿದ್ದ ಕರ್ಟನ್‌ಗಳನ್ನು ಎಳೆದಾಡಿ ಹರಿದು ಹಾಕಿದೆ.

ಸೋಮವಾರ ಬೆಳಿಗ್ಗೆ ಪಪಂ ಸಿಬ್ಬಂದಿ ಅಧ್ಯಕ್ಷರ ಕೊಠಡಿ ಬಾಗಿಲು ತೆಗೆಯುತ್ತಿದ್ದಂತೆ ಗಾಬರಿಗೊಂಡ ಬೀದಿನಾಯಿ ಓಡಿ ಹೋಗಿದೆ. ಒಳಗೆ ಹೋಗಿ ನೋಡಿದಾಗ ಬೀದಿನಾಯಿ ಕುರ್ಚಿ ಹಾಗೂ ಕರ್ಟನ್‌ಗಳನ್ನು ಹರಿದು ಹಾಕಿರುವುದು ಬೆಳಕಿಗೆ ಬಂದಿದೆ. ಪಪಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪಪಂ ಅಧ್ಯಕ್ಷ ಪಿ. ಲಕ್ಷ್ಮಣ, ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದರು

Advertisement

Udayavani is now on Telegram. Click here to join our channel and stay updated with the latest news.

Next