Advertisement

ಸರ್ವಜ್ಞ ವೃತ್ತದಲ್ಲಿ ಮೂಡಿದ ಬೆಳಕು!

05:54 PM Mar 03, 2021 | Team Udayavani |

ಕಾರ್ಕಳ: ಇಲ್ಲಿನ ಬೈಪಾಸ್ ರಸ್ತೆಯ ಸರ್ವಜ್ಞ ವೃತ್ತದಲ್ಲಿ  ಕೆಟ್ಟು ಹೋಗಿದ್ದ ಹೈಮಾಸ್ಟ್ ದೀಪವನ್ನು ಮಾ. 3ರಂದು ದುರಸ್ತಿ ಪಡಿಸಲಾಗಿದೆ.

Advertisement

ಬೈಪಾಸ್ ರಸ್ತೆಯಲ್ಲಿ ಪ್ರತಿನಿತ್ಯ ಸಹಸ್ರಾರು  ವಾಹನಗಳು ತೆರಳುತ್ತಿರುತ್ತವೆ. ಜಂಕ್ಷನ್ ನಲ್ಲಿ ಬೆಳಕು ಇಲ್ಲದೆ ಇರುವುದರಿಂದ ವಾಹನಗಳು ತೆರಳುವಾಗ ಪಾದಚಾರಿಗಳು ರಸ್ತೆ ಅಡ್ಡ ದಾಟುವಾಗ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಇತ್ತೀಚೆಗೆ ಸುದಿನ ವರದಿ ಪ್ರಕಟಿಸಿ, ದೀಪ ಉರಿಯದೆ ಆಗುತ್ತಿರುವ ಅನಾನುಕೂಲತೆ ಬಗ್ಗೆ ಸಂಬಂಧಿಸಿದವರ ಗಮನ ಸೆಳೆದಿತ್ತು. ಇದೀಗ ಗ್ರಾಮ ಪಂಚಾಯತ್ ವತಿಯಿಂದ ದುರಸ್ತಿ ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next