Advertisement

ಬೀದಿ ನಾಯಿಗಳ ಉಪಟಳ: ಏರ್‌ ಗನ್‌ ಹಿಡಿದು ಸಾಗಿದ ವ್ಯಕ್ತಿಯ ವಿರುದ್ಧ ಕೇಸು ದಾಖಲು

08:54 PM Sep 17, 2022 | Team Udayavani |

ಕಾಸರಗೋಡು: ಬೀದಿ ನಾಯಿಗಳ ಉಪಟಳದಿಂದ ಕೈಯಲ್ಲಿ ಏರ್‌ ಗನ್‌ ಹಿಡಿದು ಮಕ್ಕಳನ್ನು ಮದ್ರಸಾಕ್ಕೆ ಕರೆದೊಯ್ಯುತ್ತಿದ್ದ ಬೇಕಲ ಹದ್ದಾದ್‌ ನಗರದ ಟಿ. ಸಮೀರ್‌ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಗಲಭೆ ಸೃಷ್ಟಿಸುವ ರೀತಿಯಲ್ಲಿ ವರ್ತಿಸಿದ ಆರೋಪದಂತೆ ಈ ಪ್ರಕರಣ ದಾಖಲಿಸಲಾಗಿದೆ.

Advertisement

ಬೀದಿ ನಾಯಿಗಳ ಉಪಟಳ ಹೆಚ್ಚಾದ ಕಾರಣ ಮದ್ರಸಾ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸುವ ಸಲುವಾಗಿ ಸಮೀರ್‌ ಲೈಸನ್ಸ್‌ ಹೊಂದಿರುವ ಏರ್‌ಗನ್‌ ಕೈಯಲ್ಲಿ ಹಿಡಿದು 13 ಮಂದಿ ಮದ್ರಸಾ ವಿದ್ಯಾರ್ಥಿಗಳಿಗೆ ಬೆಂಗಾವಲಾಗಿ ಸಾಗಿ ಅವರನ್ನು ಮದ್ರಸಾಕ್ಕೆ ಸುರಕ್ಷಿತವಾಗಿ ತಲುಪಿಸಿದ್ದರು. ಈ ದೃಶ್ಯ ಭಾರೀ ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next