Advertisement

ಕೊಲ್ಲೂರು ಪರಿಸರದಲ್ಲಿ ಬಿರುಸಿನ ಕೃಷಿ ಚಟುವಟಿಕೆ

09:53 PM Jul 15, 2019 | Team Udayavani |

ಕೊಲ್ಲೂರು: ಸತತ 10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಪರಿಸರದ ಕೃಷಿಕರು ಬಿರುಸಿನ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

ಜಡ್ಕಲ್‌, ಮುದೂರು, ಇಡೂರು, ವಂಡ್ಸೆ, ಕೆರಾಡಿ, ಹೊಸೂರು, ಬೆಳ್ಳಾಲ, ಮೂಡಮುಂದು, ನೆಂಪು, ನೂಜಾಡಿ, ದೇವಲ್ಕುಂದ ಪರಿಸರದಲ್ಲಿ ಕೃಷಿ ಕಾರ್ಯ ಚುರುಕಿನಿಂದ ನಡೆಯುತ್ತಿದೆ.

ರೈತರಲ್ಲಿ ಮಂದಹಾಸ
ಜೂನ್‌ ತಿಂಗಳಲ್ಲಿ ಕಡಿಮೆ ಪ್ರಮಾಣದ ಮಳೆಯಿಂದಾಗಿ ಚಿಂತಾಗ್ರಸ್ತರಾದ್ದ ಈ ಭಾಗದ ಕೃಷಿಕರು ಇದೀಗ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹರ್ಷಿತರಾಗಿದ್ದಾರೆ.

ತೆಂಗು, ಕಂಗು, ಬಾಳೆ ಭತ್ತ ಬೆಳೆಯುವ ಕೃಷಿಕರು ದಿನವಿಡೀ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾರ್ಮಿಕರ ಕೊರತೆ
ಭತ್ತದ ಗದ್ದೆಯ ಉಳುಮೆಗೆ ವಿವಿಧ ವಿನೂತನ ಮಾದರಿಯ ಯಂತ್ರಗಳ ಬಳಕೆ ನಡೆಯುತ್ತಿದೆ. ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಗ್ರಾಮೀಣ ಪ್ರದೇಶದ ಅನೇಕ ಕಾರ್ಮಿಕರು ಉದ್ಯೋಗವನ್ನರಸಿ ನಗರ ಪ್ರದೇಶಗಳಿಗೆ ತೆರಳಿರುವುದರಿಂದ ಇರುವ ಕಾರ್ಮಿಕರಿಗೆ ದುಬಾರಿ ಕೂಲಿ ತೆರಬೇಕಾದ ಪ್ರಸಂಗ ಎದುರಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next