Advertisement
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ) ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ಮಾಡದಿರಲು ಮತ್ತು ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಬಳಸುವ ಕುರಿತು ಬುಧವಾರ ಆಂದೋಲನ ನಡೆಸಿದರು. ಗ್ರಾಹಕರು, ಅಂಗಡಿ ಮಾಲಕರಿಗೆ ಜಾಗೃತಿ ರೂಪಿಸುವ ಪ್ರಯತ್ನದಲ್ಲಿ ಕಾರ್ಯಕ್ರಮ ನಡೆಸಲಾಯಿತು.
Related Articles
Advertisement
ಸ್ಟೂಡೆಂಟ್ ಪ್ಲಾಜಾ, ಟೈಗರ್ ಸರ್ಕಲ್, ಉಪೇಂದ್ರ ಪೈ ಸರ್ಕಲ್, ಎಂಐಟಿ ಮುಖ್ಯದ್ವಾರ, ಕೆನರಾ ಮಾಲ್, ವಿದ್ಯಾರ್ಥಿಗಳ ಹಾಸ್ಟೆಲ್, ಎಂಡ್ ಪಾಯಿಂಟ್, ಸರಳೆಬೆಟ್ಟು ರಸ್ತೆ, ಮಾಹೆ ವಿ.ವಿ. ಕಟ್ಟಡ, ಕೆಎಂಸಿ ಮೊದಲಾದೆಡೆ ಆಂದೋಲನ ನಡೆಸಲಾಯಿತು.
ವಿಶಿಷ್ಟ ಆಂದೋಲನವನ್ನು ಕಂಡ ಸಾರ್ವಜನಿಕರು ಕುತೂಹಲಗೊಂಡರು. ಈ ತೆರನಾದ ಜನಜಾಗೃತಿ ಪ್ರಯತ್ನ ಇದೇ ಮೊದಲ ಬಾರಿ ಮಣಿಪಾಲದಲ್ಲಿ ನಡೆಯಿತು.