Advertisement

ಆರೋಪಿಗಳಿಗೆ ರಕ್ಷಣೆ ಕೊಡುವುದು ನಿಲ್ಲಿಸಿ: ಬಿ.ಎಂ. ಸುಕುಮಾರ ಶೆಟ್ಟಿ

03:53 PM Dec 16, 2017 | Team Udayavani |

ಬೈಂದೂರು: ಹೊನ್ನಾವರದಲ್ಲಿ ನಡೆದ ಹಿಂದೂ ಕಾರ್ಯಕರ್ತ ಪರೇಶ್‌ ಮೇಸ್ತ ಹತ್ಯೆಯನ್ನು ಖಂಡಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌ ಬೈಂದೂರು ಪ್ರಖಂಡದ ವತಿಯಿಂದ ಬೈಂದೂರಿನಲ್ಲಿ ಪ್ರತಿಭಟನೆ ಮಾಡಲಾಯಿತು.

Advertisement

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ ಶೆಟ್ಟಿ, ಇವತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಹಿಂದೂ ಯುವಕರ ಹತ್ಯೆ ಮಾಡಿ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ. ಮುಖ್ಯಮಂತ್ರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕಾಗಿ ಹಿಂದೂ ಯುವಕರ ಸಾವನ್ನು ಮುಚ್ಚಿಡುತ್ತಿದ್ದಾರೆ ಎಂದರು. 

ನಮ್ಮ ಪಕ್ಕದ ಕ್ಷೇತ್ರದಲ್ಲಿ ಕೋಮು ದಳ್ಳುರಿಗೆ ಸಹಕರಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಮುಂದಿನ ದಿನಗಳಲ್ಲಿ ಬೈಂದೂರಿಗೂ ವ್ಯಾಪಿಸಲು ಅವಕಾಶ ಕೊಡಬಹುದು. ಈ ಬಗ್ಗೆ ಯುವಕರು ಸಂಘಟಿತವಾಗಿ ಶಕ್ತರಾಗಬೇಕೆಂದು ಕರೆ ನೀಡಿದರು. 

ಈ ಸಂದರ್ಭ ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷ ಶ್ರೀಧರ್‌ ಬಿಜೂರು, ಜಿಲ್ಲಾ ಪಂಚಾಯತ್‌ ಸದಸ್ಯ ಸುರೇಶ್‌ ಬಟ್ವಾಡಿ, ಗೋಪಾಲ ಜೀ ಉಪ್ಪುಂದ, ಜಯಾನಂದ ಹೋಬಳಿದಾರ್‌, ಸತೀಶ್‌ ನಾಯಕ್‌ ನಾಡಾ, ಸುಧಾಕರ ಶೆಟ್ಟಿ ನೆಲ್ಯಾಡಿ ಹಾಗೂ ವಿವಿಧ ಹಿಂದೂ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿ ಗಳು ಭಾಗವಹಿಸಿದ್ದರು.

ಇವತ್ತು ಮುಖ್ಯಮಂತ್ರಿ ಬರುತ್ತಾರೆ ಎಂದು ಶರತ್‌ ಮಡಿವಾಳ ಅವರ ಸಾವನ್ನು 12 ಗಂಟೆ ಅನಂತರ ವಿಷಯ ಬಹಿರಂಗಪಡಿಸುತ್ತೀರಿ, ನಿಮ್ಮದೇ ಕಾರ್ಯಕ್ರಮಕ್ಕಾಗಿ ಹೊನ್ನಾವರದ ಪರೇಶ್‌ ಮೇಸ್ತ ಹತ್ಯೆಯನ್ನು ಎರಡು ದಿನ ಮುಚ್ಚಿಡುತ್ತೀರಿ ಹಾಗಾದರೆ ಇನ್ನು ಎಷ್ಟು ಶಂಕುಸ್ಥಾಪನೆ ಬಾಕಿ ಇದೆ..? ಇವತ್ತು ಪ್ರತಿಭಟನೆಗೆ ಜಾಗ ನೀಡಲು ನಿರಾಕರಿಸಿದ್ದೀರಿ, ಆದರೆ ಆರೋಪಿಗಳಿಗೆ ರಕ್ಷಣೆ ಕೊಡುವುದು ನಿಲ್ಲಿಸಿ ತತ್‌ಕ್ಷಣ ಪರೇಶ್‌ ಮೇಸ್ತ ಹತ್ಯೆ ಆರೋಪಿಗಳನ್ನು ಬಂಧಿಸದಿದ್ದರೆ ನಿಮ್ಮ ಯಾವುದೇ ಅನುಮತಿಗೆ ಕಾಯದೇ ಉಗ್ರ ಹೋರಾಟ ಮಾಡಲಾಗುವುದು.
ಬಿ.ಎಂ. ಸುಕುಮಾರ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next