Advertisement

Railway Trackನಲ್ಲಿ ಕಲ್ಲುಗಳು, ರಾಡ್‌ಗಳು!: ವಂದೇ ಭಾರತ್ ಗುರಿಯಾಗಿರಿಸಿ ಕೃತ್ಯ; Video

05:56 PM Oct 02, 2023 | Team Udayavani |

ಚಿತ್ತೋರಗಢ : ರಾಜಸ್ಥಾನದಲ್ಲಿ ಹಳಿಯ ಮೇಲೆ ಜಲ್ಲಿ ಕಲ್ಲುಗಳು , ರಾಡ್‌ಗಳನ್ನಿರಿಸಿ ಭಾರಿ ಅವಘಡ ನಡೆಸಲು ಸಂಚು ರೂಪಿಸಿರುವುದು ಕಂಡು ಬಂದಿದ್ದು, ವಂದೇ ಭಾರತ್ ಉದಯಪುರ-ಜೈಪುರ ರೈಲನ್ನು ನಿಲ್ಲಿಸಲಾಗಿದೆ.

Advertisement

ಭಾನುವಾರ ಬೆಳಗ್ಗೆ ಸುಮಾರು 09:55 ಗಂಟೆಯ ವೇಳೆ ವಿಚಾರ ಗಮನಕ್ಕೆ ಬಂದಿದ್ದು, ಸಂಖ್ಯೆ 20979 ರೈಲನ್ನು ಗಂಗರಾರ್-ಸೋನಿಯಾನ ವಿಭಾಗದಲ್ಲಿ ನಿಲ್ಲಿಸಲಾಗಿದೆ. ಜಲ್ಲಿ ಕಲ್ಲುಗಳನ್ನು ಮತ್ತು ತಲಾ ಒಂದು ಅಡಿ ದೂರದಲ್ಲಿ ಎರಡು ರಾಡ್‌ಗಳನ್ನು ಇರಿಸಲಾಗಿತ್ತು.

ರೈಲ್ವೆ ಪೊಲೀಸರು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ರೀತಿ ದುಷ್ಕೃತ್ಯ ಎಸಗುವವರ ವಿರುದ್ಧ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next