Advertisement

ಗೇರುಕಟ್ಟೆ ಜಾರಿಗೆಬೈಲು: ಮನೆಯಿಂದ ಕಳವು

09:57 AM Jun 11, 2019 | keerthan |

ಬೆಳ್ತಂಗಡಿ: ಗೇರುಕಟ್ಟೆ ಜಾರಿಗೆಬೈಲು ನಿವಾಸಿ ಉಸ್ಮಾನ್‌ ಅವರ ಮನೆಯ ಬೀಗ ಒಡೆದು ನಗ – ನಗದು ಕಳವು ಮಾಡಲಾಗಿದೆ.

Advertisement

ಉಸ್ಮಾನ್‌ ಅವರು 10 ದಿನಗಳ ಹಿಂದೆ ಮೂರು ತಿಂಗಳ ವೀಸಾದಲ್ಲಿ ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಮೇಲಿನ ಮನೆಯನ್ನು ಹಮೀದ್‌ ಎಂಬವರಿಗೆ ಬಾಡಿಗೆಗೆ ನೀಡಿದ್ದರು. ಅವರ ಪತ್ನಿ ಹಬ್ಬದ ಹಿಂದಿನ ದಿನ ತನ್ನ ಅಕ್ಕನ ಮನೆ ಕಲ್ಲೇರಿಗೆ ತೆರಳಿದ್ದರು. ಸೋಮವಾರ ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ.

ಹಿಂದಿನ ಬಾಗಿಲನ್ನು ಒಡೆದು ಕಳ್ಳರು ಮೇಲಿನ ಮನೆಗೆ ನುಗ್ಗಿದ್ದಾರೆ. ಎರಡೂ ಮನೆಗಳ 8 ಕಪಾಟುಗಳನ್ನು ಒಡೆದು ಸಿಕ್ಕ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ. ಹಮೀದ್‌ ಮನೆಯಿಂದ 22 ಸಾ. ಮೌಲ್ಯದ ಚಿನ್ನಾಭರಣ ಹಾಗೂ 2 ಸಾವಿರ ರೂ. ಕಳವು ಮಾಡಲಾಗಿದೆ. ಉಸ್ಮಾನ್‌ ಅವರು ಮಂಗಳವಾರ ವಿದೇಶದಿಂದ ವಾಪಸಾಗಲಿದ್ದಾರೆ. ಬಳಿಕ ಕಳ್ಳತನವಾದ ಸೊತ್ತಿನ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next