Advertisement

ಬೀದರ್‌ ಬಂದ್‌ ವೇಳೆ ಕಲ್ಲು ತೂರಾಟ

10:06 AM Jan 10, 2018 | |

ಬೀದರ್‌: ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಮತ್ತು ಸಂವಿಧಾನದ ಬಗೆಗಿನ ಅವೈಜ್ಞಾನಿಕ ಹೇಳಿಕೆ ಖಂಡಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಮಂಗಳವಾರ ಕರೆ ನೀಡಿದ್ದ ಬೀದರ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ. ಪ್ರತಿಭಟನೆ ವೇಳೆ ಪರಿಸ್ಥಿತಿ
ವಿಕೋಪಕ್ಕೆ ತಿರುಗಿದ್ದು, ಆಣದೂರಿನಲ್ಲಿ ಉದ್ರಿಕ್ತರ ಮೇಲೆ ಲಘು ಲಾಠಿ ಪ್ರಹಾರ ನಡೆದಿದೆ. ಈ ವೇಳೆ 15ಕ್ಕೂ ಹೆಚ್ಚು ಕಾರುಗಳು ಜಖಂಗೊಂಡಿವೆ. ಬಂದ್‌ ಹಿನ್ನೆಲೆಯಲ್ಲಿ ಇಡೀ ಬೀದರ್‌ ನಗರ ಸ್ತಬ್ಧವಾಗಿತ್ತು. ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದರೆ, ವಾಹನಗಳ ಸಂಚಾರ ಸಂಪೂರ್ಣ ಸ್ಥಗಿ
ತಗೊಂಡಿತ್ತು.

Advertisement

ಮುಂಜಾಗ್ರತಾ ಕ್ರಮವಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನಗರದಲ್ಲಿ ಬಿಜೆಪಿ ಮುಖಂಡರೊಬ್ಬರ ಅಂತ್ಯಕ್ರಿಯೆಗಾಗಿ ಆಗಮಿಸಿದ್ದ ಹುಮನಾಬಾದ ಮಾಜಿ ಶಾಸಕ ಸುಭಾಷ ಕಲ್ಲೂರ ಅವರ ಕಾರನ್ನು ಗಾಂಧಿ ಗಂಜ್‌ನಲ್ಲಿ ತಡೆದು ಧ್ವಂಸಗೊಳಿಸಲಾ ಯಿತು. ನಗರ ಸಮೀಪದ ಆಣದೂರಿನಲ್ಲಿ ದಲಿತ ಮುಖಂಡರು ಬಲವಂತವಾಗಿ ಅಂಗಡಿಗಳನ್ನು ಬಂದ್‌ ಮಾಡಿಸಲು ಮುಂದಾದಾಗ ಪರಸ್ಪರ ನಡೆದ ವಾಗ್ವಾದ
ವಿಕೋಪಕ್ಕೆ ತಿರುಗಿತು. ನಂತರ ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next