Advertisement

ಅಡ್ಡದಾರಿಯಲ್ಲಿ ಬಂದು ಅರ್ಧದಾರಿಯಲ್ಲೇ ಉಳಿದ್ರು

08:56 PM May 25, 2020 | Sriram |

ಅಫಜಲಪುರ: ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ನಾಲ್ಕು ಕುಟುಂಬಗಳ 15 ಕಾರ್ಮಿಕರು ಮರಳಿ ಊರಿಗೆ ಹೋಗಲಾಗದೆ ಅಡ್ಡದಾರಿಯಿಂದ ಬಂದು ಅರ್ಧ ದಾರಿಯಲ್ಲೇ ಉಳಿದಿದ್ದಾರೆ.

Advertisement

ಇವರೆಲ್ಲ ಮಹಾರಾಷ್ಟ್ರ ರಾಯಘಡ ತಾಲೂಕಿನಲ್ಲಿ ಇಟ್ಟಂಗಿ ಭಟ್ಟಿ ಕೆಲಸಕ್ಕೆಂದು ಹೋಗಿದ್ದರು. ಕೋವಿಡ್-19 ಲಾಕ್‌ಡೌನ್‌ ಇದ್ದಾಗ ಊರಿಗೆ ಬರಲು ಸಾಧ್ಯವಾಗದೇ ಅಲ್ಲಿಯೇ ಉಳಿದಿದ್ದರು. ಇನ್ನು ಸರ್ಕಾರ ಊರಿಗೆ ಬರಲು ಅನುಮತಿ ಕೊಟ್ಟಾಗಲೂ ಬಂದಿರಲಿಲ್ಲ.

ಆದರೆ ಸರ್ಕಾರ ವಲಸೆ ಕಾರ್ಮಿಕರನ್ನು ಕರೆಯಿಸಿಕೊಳ್ಳುವುದು ನಿಲ್ಲಿಸಿದ ಮೇಲೆ ಅಲ್ಲಿಂದ ಅಡ್ಡದಾರಿಯಿಂದ ಚವಡಾಪುರದವರೆಗೂ ಬಂದು ವಾಹನ ವ್ಯವಸ್ಥೆ ಇಲ್ಲದೇ ಸ್ವಗ್ರಾಮಕ್ಕೆ ಹೋಗಲಾಗದೆ ಕುಳಿತಿದ್ದಾರೆ.

ಸಂಬಂಧಪಟ್ಟವರು ಇವರನ್ನು ಕಡಣಿ ಗ್ರಾಮಕ್ಕೆ ತಲುಪಿಸಿ ಕ್ವಾರಂಟೈನ್‌ ಕೇಂದ್ರಕ್ಕೆ ಕರೆದೊಯ್ಯುವ ಕೆಲಸ ಮಾಡಬೇಕಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next