Advertisement

Congress ಇಂದಿನ ಸ್ಥಿತಿ “ಮನೆಯೊಂದು 100 ಬಾಗಿಲು’: ಮುನಿಸ್ವಾಮಿ ವ್ಯಂಗ್ಯ

07:20 PM Mar 27, 2024 | Team Udayavani |

ಕೋಲಾರ: ಕೋಲಾರ ಲೋಕಸಭಾ ಟಿಕೆಟ್‌ ನೀಡುವ ಕುರಿತು ಕಾಂಗ್ರೆಸ್‌ ಪಕ್ಷದಲ್ಲಿ “ಮನೆಯೊಂದು 100 ಬಾಗಿಲು’ ಎಂಬಂತಾಗಿದೆ, 3 ತಿಂಗಳಿಂದ ಟಿಕೆಟ್‌ ಘೋಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ ಸಂಸದ ಮುನಿಸ್ವಾಮಿ ಬಿಜೆಪಿ ದೇಶ, ಧರ್ಮ ರಕ್ಷಣೆಗೆ ಎಂತಹ ತ್ಯಾಗಕ್ಕೂ ಸಿದ್ದ ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ ಎಂದರು.

Advertisement

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಕಾಂಗ್ರೆಸ್‌ನಲ್ಲಿ ಮನೆ ಒಂದು ನೂರು ಬಾಗಿಲು ಆಗಿದೆ. ಎಡಗೈ, ಬಲಗೈ, ಮುಂದೆ, ಹಿಂದೆ ಎಂದು ಗಲಾಟೆ ಒಂದು ತಿಂಗಳಿಂದಲೂ ಲೋಕಸಭೆ ಚುನಾವಣೆಯ ಅಭ್ಯರ್ಥಿ ಸಂಬಂಧ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಶಾಸಕರು, ಎಂಎಲ್ಸಿಗಳು ರಾಜೀನಾಮೆ ಕೊಡಲು ಮುಂದಾಗಿದ್ದಾರೆಂಬ ಸುದ್ದಿ ಇದೆ, ಆದರೆ ಅದು ಅವರ ಆಂತರಿಕ ವಿಚಾರ ಎಂದರು.

ನನಗೆ ಬಿಜೆಪಿಯಿಂದ ಟಿಕೆಟ್‌ ನೀಡಲು ಕೊನೆಯವರೆಗೂ ಹೋರಾಟ ನಡೆಯಿತು. ಮೈತ್ರಿಯಿಂದಾಗಿ ನಾವು ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಈಗಾಗಲೇ ಅಮಿತ್‌ ಶಾ ಮಾತನಾಡಿದ್ದು ಸೂಕ್ತ ಸ್ಥಾನಮಾನ ಕೊಡುವ ಭರವಸೆ ನೀಡಿದ್ದಾರೆ. ನಡ್ಡಾ ಜತೆಗೂ ಮಾತನಾಡಿದ್ದೇನೆ. ಟಿಕೆಟ್‌ ವಿಚಾರವಾಗಿ ನನ್ನ ತಪ್ಪಿದ್ದರೆ ಹೇಳಿ ಎಂದು ನಾನೂ ಕೇಳಿದೆ. ಸರ್ವೇ ಪ್ರಕಾರ ನನ್ನ ಗೆಲುವು ಇತ್ತು, ಆದರೂ ಮೈತ್ರಿಯಿಂದಾಗಿ ಒಪ್ಪಿಕೊಂಡಿದ್ದು, ಹತಾಶರಾಗದೆ ಕೆಲಸ ಮಾಡಲು ಪಣ ತೊಟ್ಟಿದ್ದೇನೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next