Advertisement

ಜನರ ಇಚ್ಛೆಯಂತೆ ಪ್ರತಿಮೆ ನಿರ್ಮಾಣ

11:09 PM Apr 02, 2019 | sudhir |

ನವದೆಹಲಿ: ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಉತ್ತರ ಪ್ರದೇಶದಾದ್ಯಂತ ಬೃಹತ್‌ ಗಾತ್ರದ ಪ್ರತಿಮೆಗಳನ್ನು ನಿರ್ಮಿಸಿದ್ದನ್ನು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ.

Advertisement

ಪ್ರತಿಮೆಗಳನ್ನು ಜನರ ಇಚ್ಛೆಯಂತೆ ನಿರ್ಮಿಸಿದ್ದು ಎಂದು ಅವರು ಹೇಳಿದ್ದಾರೆ. ಮಾಯಾವತಿ ಅಧಿಕಾರಾವಧಿಯಲ್ಲಿ ಪ್ರತಿಮೆಗಳನ್ನು ನಿರ್ಮಿಸಲು ಖರ್ಚು ಮಾಡಿದ್ದ ಹಣವನ್ನು ಹಿಂದಿರುಗಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಈ ಮೊಕದ್ದಮೆ ಸಂಬಂಧ ವಿಚಾರಣೆ ಎದುರಿಸಿದ್ದ ಮಾಯಾವತಿ, ತಾವು ತಮ್ಮ ಪಕ್ಷದ ಚಿಹ್ನೆಯನ್ನಾಗಲೀ ಅಥವಾ ತಮನ್ನಾಗಲೀ ವಿಜೃಂಭಿಸುವ ಸಲುವಾಗಿ ಪ್ರತಿಮೆಗಳನ್ನು ನಿರ್ಮಿಸಿಲ್ಲ. ಬದಲಾಗಿ, ರಾಜ್ಯದ ಧೀಮಂತ ಸಾಮಾಜಿಕ ಹೋರಾಟಗಾರರ, ರಾಜ್ಯದ ನಾಯಕರ ಕುರಿತು ಜನರಿಗೆ ತಿಳಿವಳಿಕೆ ಹೆಚ್ಚಿಸಲು ಪ್ರತಿಮೆಗಳನ್ನು ನಿರ್ಮಿಸಿದ್ದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next