Advertisement

VHP; ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ ನಡೆಸಲು ನಿರ್ಧಾರ

05:57 PM Feb 02, 2024 | Team Udayavani |

ಮಂಗಳೂರು:ಮಂಡ್ಯ ಕೆರಗೋಡು ಹನುಮ ಧ್ವಜ ತೆರವು ಪ್ರಕರಣದ ಕುರಿತು ಆಕ್ರೋಶ ತೀವ್ರವಾಗಿರುವ ವೇಳೆಯಲ್ಲಿ ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ ನಡೆಸಲುವಿಶ್ವ ಹಿಂದೂ ಪರಿಷತ್ ನಿರ್ಧಾರ ಮಾಡಿದೆ.

Advertisement

ಫೆ.9 ರ ವರೆಗೂ ಮನೆ ಮನೆಗಳಲ್ಲಿ ಧ್ವಜಕಟ್ಟೆಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಹನುಮಧ್ವಜ ಹಾರಿಸುವುದಕ್ಕೆ ವಿಶ್ವ ಹಿಂದೂ ಪರಿಷತ್‌ ನಿರ್ಧಾರ ಮಾಡಿದೆ. ಫೆ.9 ರಂದು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ವಿಹಿಂಪ ಪ್ರಾಂತ ಸಂಯೋಜಕ ಸುನಿಲ್‌ ಕೆ.ಆರ್ ಮಾಹಿತಿ ನೀಡಿದ್ದಾರೆ. ಹನುಮಧ್ವಜವನ್ನು ಜನರು ತಮ್ಮ ನಿವಾಸಗಳಲ್ಲಿ ಪ್ರದರ್ಶಿಸಲು ವಿಶ್ವ ಹಿಂದೂ ಪರಿಷತ್ತು ಮನವಿ ಮಾಡಿದೆ.

ಕೆರಗೋಡು ಹನುಮ ಧ್ವಜ ತೆರವು ಪ್ರಕರಣ ನಡೆದ ಬಳಿಕ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೂ ಭಾಗಿಯಾಗಿದ್ದರು. ರಾಜ್ಯದ ವಿವಿಧ ಕಡೆಗಳಲ್ಲಿ ಘಟನೆ ಬಳಿಕ ಧ್ವಜ ವಿವಾದ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next