Advertisement

ಭಾರತ ಹಿಂದುಳಿಯಲು 5 ರಾಜ್ಯಗಳು ಕಾರಣ: ನೀತಿ ಆಯೋಗ ಸಿಇಓ

11:34 AM Apr 24, 2018 | Team Udayavani |

ಹೊಸದಿಲ್ಲಿ : ಭಾರತ ಹಿಂದುಳಿದಿರುವುದಕ್ಕೆ ಬಿಹಾರ, ಉತ್ತರ ಪ್ರದೇಶ, ಛಿತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳೇ ಕಾರಣ ಎಂದು ನೀತಿ ಆಯೋಗದ ಸಿಇಓ ಅಮಿತಾಭ್‌ ಕಾಂತ್‌ ಇಂದು ಮಂಗಳವಾರ ಹೇಳಿದ್ದಾರೆ.

Advertisement

“ವಿಶೇಷವಾಗಿ ಸಾಮಾಜಿಕ ಅಭಿವೃದ್ಧಿ ರಂಗದಲ್ಲಿ  ಭಾರತ ಹಿಂದುಳಿಯಲು ದೇಶದ ಪೂರ್ವ ಭಾಗದ ರಾಜ್ಯಗಳಾದ ಬಿಹಾರ, ಯುಪಿ, ಛತ್ತೀಸ್‌ಗಢ, ಎಂಪಿ, ಮತ್ತು ರಾಜಸ್ಥಾನ ರಾಜ್ಯಗಳೇ ಕಾರಣವಾಗಿವೆ’ ಎಂದವರು ಹೇಳಿದರು. 

ಜಾಮೀಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಏರ್ಪಟ್ಟಿದ್ದ ಮೊದಲ ಖಾನ್‌ ಅಬ್ದುಲ್‌ ಗಫ‌ರ್‌ ಖಾನ್‌ ಮೆಮೋರಿಯಲ್‌ ಲೆಕ್ಚರ್‌ನಲ್ಲಿ ಕಾಂತ್‌ ಅವರಿಂದ ಈ ಹೇಳಿಕೆ ಬಂದಿದೆ. 

ಭಾರತವು ಸುಲಲಿತ ಉದ್ಯಮವೇ ಮೊದಲಾದ ಅರ್ಥಿಕ ರಂಗದಲ್ಲಿ ಉತ್ತಮ ಪ್ರಗತಿಯನ್ನು ತೋರಿದೆಯಾದರೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದೆ ಎಂದು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next