Advertisement

ದೇಶದ್ರೋಹಿ ವಿದ್ಯಾರ್ಥಿಗಳ ಬಿಡುಗಡೆಗೆ ಒತ್ತಡ ಹಾಕಿದ್ದು ಯಾರು ? ಬಹಿರಂಗವಾಗಬೇಕು: ಮುತಾಲಿಕ್

02:42 PM Feb 17, 2020 | Team Udayavani |

ಕಲಬುರಗಿ: ಹುಬ್ಬಳ್ಳಿಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ದು ಯಾರ ಒತ್ತಡದಿಂದ ಎನ್ನುವುದು ಬಹಿರಂಗವಾಗಬೇಕೆಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂದು ದೇಶದ್ರೋಹ ಪ್ರಕರಣ ದಾಖಲಿಸಿ, ಬಂಧಿಸಿರುವುದಾಗಿ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ದೀಪಕ್ ಹೇಳಿದ್ದರು. ಆದರೆ ಏಕಾಏಕಿ ಯೂ ಟರ್ನ್ ಹೊಡೆದು, ಅವರನ್ನು ಬಿಡುಗಡೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ದೇಶದ್ರೋಹಿಗಳನ್ನು ಯಾವ ಕಾರಣದಿಂದ ಬಿಡುಗಡೆ ಮಾಡಿದರು? ಯಾರಿಂದ ಒತ್ತಡ ಬಂದಿದೆ ಎನ್ನುವುದನ್ನು ಬಹಿರಂಗ ಪಡಿಸಬೇಕು‌. ಇದರ ಹಿಂದೆ ಪೊಲೀಸರು ಅಥವಾ  ರಾಜಕೀಯ ವ್ಯಕ್ತಿಗಳ ಕೈವಾಡ ಇದೆಯಾ ಅನ್ನೋದನ್ನು ಬಹಿರಂಗಗೊಳಿಸಬೇಕು.  ಪೊಲೀಸ್ ಆಯುಕ್ತ ದಿಲೀಪ್ ಅವರನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ಆಯುಕ್ತರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೂವರು ವಿದ್ಯಾರ್ಥಿಗಳ ಬಿಡುಗಡೆ ಹಿಂದೆ ಕೆಎಲ್ಇ ಆಡಳಿತ ಮಂಡಳಿ ಒತ್ತಡ ತಂದಿರುವ ಅನುಮಾನಗಳೂ ಇವೆ. ದೇಶ ದ್ರೋಹಿಗಳನ್ಬು ಬಚಾವ್ ಮಾಡಲು ಕೆಎಲ್ಇ ಸೊಸೈಟಿ ಪ್ರಯತ್ನ ಮಾಡಿದರೆ ಅದು ತಪ್ಪು. ದೇಶದ್ರೋಹಿಗಳಿಗೆ ಬೆಂಬಲಿಸುವುದು ಹೆತ್ತ ತಾಯಿಗೆ ದ್ರೋಹ ಬಗೆದಂತೆ. ದೇಶದ್ರೋಹಿಗಳನ್ನು ಎನ್ ಕೌಂಟರ್ ಮಾಡಬೇಕು. ಅವರು ಯಾವತ್ತು ಯಾವ ಕಾಲೇಜಿನಲ್ಲಿ ಓದದಂತೆ ಬ್ಲಾಕ್ ಮಾಡಬೇಕೆಂದರು.

ಮಕ್ಕಳ ಮೇಲೆ ದೇಶದ್ರೋಹ ತಪ್ಪು: ಇದೇ ವೇಳೆಯಲ್ಲಿ  ಬೀದರ್ ಶಾಹಿನ್  ಶಾಲಾ ವಿದ್ಯಾರ್ಥಿಗಳ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಿದ್ದು ಸರಿಯಲ್ಲ ಎಂದು ಮುತಾಲಿಕ್ ಹೇಳಿದರು.ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ಮೊದಲು ಶಿಕ್ಷಣ ಇಲಾಖೆಯ ಡಿಡಿಪಿಐ ಆಡಳಿತ ಮಂಡಳಿಗೆ ನೋಟಿಸ್ ನೀಡಬೇಕಿತ್ತು.‌ ನೋಟಿಸ್ ನೀಡಿದ ನಂತರ ಶಾಲೆಯಿಂದ ಉತ್ತರ ಪಡೆಯಬೇಕಿತ್ತು. ಆದರೆ, ನೇರವಾಗಿ ವಿದ್ಯಾರ್ಥಿಗಳು ಮತ್ತು ಪಾಲಕರ ಮೇಲೆ ದೇಶದ್ರೋಹಿ ಕೇಸ್ ಹಾಕಿರುವ ಪೊಲೀಸರು ಕ್ರಮ ತಪ್ಪು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next