Advertisement

ದಿ.ಕಯ್ಯಾರ ಕಿಂಞಣ್ಣ ರೈ ನಿವಾಸಕ್ಕೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ತಂಡ ಭೇಟಿ

09:24 AM Jun 19, 2021 | Team Udayavani |

ಕಾಸರಗೋಡು:ಗಡಿನಾಡಲ್ಲಿ ಕನ್ನಡದ ಕಾವಲುಗಾರಾಗಿದ್ದ ಕನ್ನಡ ದ  ಖ್ಯಾತ ಸಾಹಿತಿ ನಾಡೋಜ ದಿವಂಗತ ಕಯ್ಯಾರ ಕಿಂಞಣ್ಣ ರೈಯವರ ನಿವಾಸಕ್ಕೆ ಇಂದು ರಾಜ್ಯ ಕಾರ್ಯ ನಿರತ ಪತ್ರ ಕರ್ತರ ಸಂಘಗಳ ಒಕ್ಕೂಟದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ಪತ್ರಕರ್ತರ ಪ್ರತಿನಿಧಿಗಳ ತಂಡ ಭೇಟಿ ನೀಡಿತು.

Advertisement

ಈ ಸಂದರ್ಭದಲ್ಲಿ ಅವರ ಪುತ್ರ ಪ್ರದೀಪ್ ರೈ ಯವರು ಕಯ್ಯಾರ ಕಿಂಞಣ್ಣ ರೈ ನೆನಪಿನಲ್ಲಿ ಸ್ಮಾರಕ ರಚನೆಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಕಯ್ಯಾರ ಕಿಂಞಣ್ಣ ರೈಯವರ ಪುತ್ರ ಪ್ರದೀಪ್ ರೈ ದಂಪತಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಇದೇ ಸಂದರ್ಭದ ಲ್ಲಿ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಚೆ ಶಾಂತ ಅವರನ್ನು ಸ್ಮರಣಿಕೆ ನೀಡಿ ಗೌರವಿ ಸಲಾಯಿತು. ಕಯ್ಯಾರ ರ ಪುತ್ರ ಪ್ರದೀಪ್ ರೈ ದಂಪತಿಗಳು ಅತಿಥಿ ಗಳಾಗಿ ಆಗಮಿಸಿದ ಶಿವಾನಂದ ತಗಡೂರು ಹಾಗೂ ಮದನ ಗೌಡ ಅವರಿಗೆ ಕಯ್ಯಾರರ ಕ್ರತಿಗಳೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ  ಶಾಂತಾ,ಏಷ್ಯನ್ ಪತ್ರ ಕರ್ತರ ಸಂಘದ ಸಂಚಾಲಕ ಮದನ್ ಗೌಡ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್,ಕಾರ್ಯ ಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಹಾಗೂ ಕಾಸರಗೋಡು ಕಾರ್ಯ ನಿರತ ಕನ್ನಡ ಪತ್ರಕರ್ತರ  ಸಂಘದ ಸದಸ್ಯ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next