Advertisement

ಜಮ್ಮುವಿನಲ್ಲಿ ರಾಜ್ಯದ ಯೋಧ ಹುತಾತ್ಮ

06:40 AM Mar 03, 2018 | Team Udayavani |

ಗೋಕಾಕ್‌: ತಾಲೂಕಿನ ನಬಾಪುರ (ಖನಗಾಂವ) ಗ್ರಾಮದ ಯೋಧ ಲಾನ್ಸ್‌ ನಾಯಕ ಈರಣ್ಣಾ ಸಿದ್ದಲಿಂಗಪ್ಪಾ ಪಾಟೀಲ (25)ಫೆ. 28ರಂದು ಜಮ್ಮುವಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ನಡೆದ ಫೈರಿಂಗ್‌ನಲ್ಲಿ ಹುತಾತ್ಮರಾಗಿದ್ದು, ಅಂತ್ಯಕ್ರಿಯೆ ಶನಿವಾರ ನೆರವೇರಲಿದೆ.

Advertisement

ಮೃತ ಯೋಧ ಪಾಟೀಲ ಜಮ್ಮುವಿನ ನಗರೋಟಾ ಸೆಕ್ಟರ್‌ನಲ್ಲಿ 651 ಎಂಜನಿಯರಿಂಗ್‌ ಪ್ಲಾಂಟ್‌ ಯೂನಿಟ್‌ ಮದ್ರಾಸ್‌ ರೆಜಿಮೆಂಟ್‌ನಲ್ಲಿ ಕಳೆದ 5 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ಯೋಧನ ತಂದೆ-ತಾಯಿ ಗ್ರಾಮದಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ, ಸಹೋದರ ಕೂಡ ಶ್ರೀನಗರದಲ್ಲಿ ಯೋಧನಾಗಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಅಂತ್ಯಕ್ರಿಯೆ
ಶನಿವಾರ ಮದ್ಯಾಹ್ನ 12 ಗಂಟೆಗೆ ಗೋಕಾಕ್‌ನ ನಬಾಪೂರ (ಖನಗಾಂವ) ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
 

Advertisement

Udayavani is now on Telegram. Click here to join our channel and stay updated with the latest news.

Next